Advertisement

ವಿಜ್ಞಾನ ಮಾದರಿ ಪ್ರದರ್ಶನಕ್ಕೆ ತೆರೆ

12:29 PM Jan 14, 2017 | Team Udayavani |

ಹುಬ್ಬಳ್ಳಿ: ಅಗಸ್ತ್ಯ ಅಂತಾರಾಷ್ಟ್ರೀಯ ಫೌಂಡೇಶನ್‌ ನಿಂದ ನ್ಯೂ ಕಾಟನ್‌ ಮಾರ್ಕೆಟನಲ್ಲಿರುವ ಸಾಂಸ್ಕೃತಿಕ ಭವನದಲ್ಲಿ ನಡೆದ ರಾಷ್ಟ್ರಮಟ್ಟದ ವಿಜ್ಞಾನ ಮಾದರಿ ತಯಾರಿಕಾ ಸ್ಪರ್ಧೆ ಮತ್ತು ಪ್ರದರ್ಶನಕ್ಕೆ ಶುಕ್ರವಾರ ತೆರೆಬಿದ್ದಿದ್ದು, ವಿಜ್ಞಾನ ಮಾದರಿಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. 

Advertisement

6 ಮತ್ತು 7ನೇ ತರಗತಿ ಹಿರಿಯ ಪ್ರಾಥಮಿಕ ಶಾಲೆಯ ವಿಭಾಗದಲ್ಲಿ ಪ್ರಥಮ ಬಹುಮಾನ ಗುಜರಾತನ ರಾಜಕೋಟಾದ ಶ್ರೀ ಜಿ.ಕೆ.ದೋಲಕೈಯಾ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ನಿರ್ಮಿಸಿದ ಅಂಧರಿಗೆ ಉಪಯೋಗವಾಗುವ ಸ್ಮಾರ್ಟ್‌ ಸ್ಟಿಕ್‌ಗೆ ಪ್ರಥಮ ಸ್ಥಾನ ಬಂದಿದ್ದು,

20 ಸಾವಿರ ನಗದು ಹಾಗೂ ಪ್ರಶಸ್ತಿ ಫ‌ಲಕ, ದ್ವಿತೀಯ ಬಹುಮಾನ ಮಹಾರಾಷ್ಟ್ರ ವರ್ಧಾ ಜಿಲ್ಲೆಯ ಹಿರಿಯ ಪ್ರಾಥಮಿಕ ಶಾಲೆ ಸಾಯಿರಪುರ ವಿದ್ಯಾರ್ಥಿಗಳು ನಿರ್ಮಿಸಿ ಸೋಲಾರ್‌ ಮೂಲಕ ಹುಲ್ಲು ಕಟಾವು ಯಂತ್ರಕ್ಕೆ 10 ಸಾವಿರ ನಗದು ಹಾಗೂ ಪ್ರಶಸ್ತಿ ಫ‌ಲಕ ನೀಡಲಾಯಿತು. 

8 ಮತ್ತು 10ನೇ ತರಗತಿ ಪ್ರೌಢಶಾಲೆ ವಿಭಾಗದಲ್ಲಿ ದಾವಣಗೆರೆಯ ಜೈನ್‌ ವಿದ್ಯಾಲಯದ ವಿದ್ಯಾರ್ಥಿಗಳು ನಿರ್ಮಿಸಿದ ಕಚ್ಚಾ ಪ್ಲಾಸ್ಟಿಕ್‌ನಿಂದ ಇಂಧನ ಉತ್ಪತ್ತಿ ಮಾದರಿಗೆ ಪ್ರಥಮ ಬಹುಮಾನ 20 ಸಾವಿರ ನಗದು ಹಾಗೂ ಪ್ರಶಸ್ತಿ ಫ‌ಲಕವನ್ನು ನೀಡಲಾಯಿತು.

ತೆಲಂಗಾಣದ ಹೈದ್ರಾಬಾದ್‌ ಜಿಲ್ಲೆಯ ಮಯಾಪುರ ವಿಕಾಸ ಶಾಲೆ ಬಾಚುಪಾಳ್ಯ ಶಾಲೆಯ ವಿದ್ಯಾರ್ಥಿಗಳು ಕಾರ್ಬೈಡ್‌ ನಿಂದ ಬದುಕಿನ ಮೇಲಾಗುವ ಪರಿಣಾಮ ಕುರಿತಾಗಿ ತಯಾರಿಸಿದ ಮಾದರಿಗೆ ದ್ವಿತೀಯ ಬಹುಮಾನ  10 ಸಾವಿರ ನಗದು ಹಾಗೂ ಪ್ರಶಸ್ತಿ ಫ‌ಲಕ ನೀಡಲಾಯಿತು.

Advertisement

ಪಿಯುಸಿ, ಐಟಿಐ ಹಾಗೂ ಡಿಪ್ಲೋಮಾ ವಿಭಾಗದಲ್ಲಿ ಬೆಳಗಾವಿಯ ಕೆಎಲ್‌ಇ ಸ್ವತಂತ್ರ ಕಾಲೇಜಿನ ವಿದ್ಯಾರ್ಥಿಗಳು ಬಹುದ್ದೇಶದ ಕುರ್ಚಿಯ ಮಾದರಿಗೆ ಪ್ರಥಮ ಬಹುಮಾನವಾಗಿ 20 ಸಾವಿರ ನಗದು ಹಾಗೂ ಪ್ರಶಸ್ತಿ ಫ‌ಲಕ, ಸಿಲ್ಲವಾಸ್‌ ಹವೇಲಿ ಜಿಲ್ಲೆಯ ಸರಕಾರಿ ಉನ್ನತ ಮಾಧ್ಯಮಿಕ ಶಾಲೆ ಮರಾಠಿ ಮಾಧ್ಯಮದ ವಿದ್ಯಾರ್ಥಿಗಳು ನಿರ್ಮಿಸಿದ ನಿರ್ಮಲೀಕಾರಕ ಪದಾರ್ಥಗಳನ್ನು ಜೈವಿಕ ಪರಿವರ್ತನೆಗೊಳಿಸುವ ಮಾದರಿಗೆ ದ್ವಿತೀಯ ಬಹುಮಾನ 10 ಸಾವಿರ ನಗದು ಹಾಗೂ ಪ್ರಶಸ್ತಿ ನೀಡಲಾಗಿದೆ. 

ಉತ್ತಮ ವಿಜ್ಞಾನ ಮಾದರಿ ನಿರ್ಮಿಸಿದ್ದ ಜಿಂದಾಲ್‌ ವಿದ್ಯಾಮಂದಿರದ ವಿದ್ಯಾರ್ಥಿಗಳಿಗೆ ಪ್ರಥಮ ಬಹುಮಾನ 10 ಸಾವಿರ ನಗದು ಹಾಗೂ ಪ್ರಶಸ್ತಿ, ದ್ವಿತೀಯ ಬಹುಮಾನ ಗದಗ ಜಿಲ್ಲೆ ಆನಂದೇಶ್ವರ ಪ್ರೌಢಶಾಲೆ ಅಬ್ಬಿಗೇರಿ ವಿದ್ಯಾರ್ಥಿಗಳಿಗೆ ದ್ವಿತೀಯ ಬಹುಮಾನ 5 ಸಾವಿರ ನಗದು ಹಾಗೂ ಪ್ರಶಸ್ತಿ ವಿತರಿಸಲಾಯಿತು. ತೃತೀಯ, ನಾಲ್ಕನೇ ಹಾಗೂ ಐದನೇ ಸ್ಥಾನದಲ್ಲಿ ಬಂದ ವಿದ್ಯಾರ್ಥಿಗಳಿಗೆ ಸಮಾಧಾನಕರ ಬಹುಮಾನ ವಿತರಿಸಲಾಯಿತು. 

ಬಹುಮಾನ ವಿತರಣೆ: ಸಂಜೆ  ನಡೆದ ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ಪ್ರೊ| ಎನ್‌.ಎಚ್‌. ಅಯಾಚಿತ್‌, ಶಿಕ್ಷಣ ಎಂಬುದು ಸದಾ ಕಲಿಯುತ್ತಿರುವ ದಾರಿ. ಈ ದಾರಿಯಲ್ಲಿ ನಡೆಯುತ್ತಿರುವಾಗ ಸದಾ ಕಲಿಕೆಯೇ ನಮ್ಮ ಗುರಿಯಾಗಿರಬೇಕು ಎಂದರು.

ಯುವ ವಿಜ್ಞಾನಿ ಡಾ| ಹರೀಶ ಭಟ್‌ ಮಾತನಾಡಿ, ಜಗತ್ತಿನಲ್ಲಿರುವ ಸಮಸ್ಯೆಗಳ ಕುರಿತು ಎಲ್ಲ ಯುವ ವಿಜ್ಞಾನಿಗಳು ತಮ್ಮ ಮನದಲ್ಲಿರುವ ಮಾದರಿಗಳನ್ನು ಸಿದ್ಧಪಡಿಸಿ ನಾವುಗಳು ವಿಜ್ಞಾನಿಯಾಗುವ ಅರ್ಹತೆ ಹೊಂದಿದ್ದೇವೆ ಎಂಬುದನ್ನು ಸಾಬೀತು ಪಡಿಸಿದ್ದಾರೆ ಎಂದರು.

 ಶಹರ ಕ್ಷೇತ್ರಶಿಕ್ಷಣಾಧಿಕಾರಿ ಉಮೇಶ ಬೊಮ್ಮಕ್ಕನವರ ಮಾತನಾಡಿ, ಮಕ್ಕಳಲ್ಲಿ ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಹುಟ್ಟಿದಾಗಲೇ ಅವರ ಏನನ್ನಾದರು ಸಾಧಿಸಲು ಸಾಧ್ಯ ಎಂದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ತಮ್ಮ ಅನಿಸಿಕೆ ಹಂಚಿಕೊಂಡರು. ಸೋನಂ ಮೆಹತಾ, ಠಕ್ಕರ, ಅಜಿತ ಬಾಸೂರ, ಡಾ| ನೀಲಂ  ಮಹೇಶ್ವರಿ, ಎಸ್‌. ಎಸ್‌. ಕಳ್ಳಿಮನಿ ಇನ್ನಿತರರು ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next