Advertisement

ಅಂಡರ್‌ ಪಾಸ್‌ನಲ್ಲಿ  ಮುಳುಗಿದ ಬಸ್‌!:ಶಾಲಾ ಮಕ್ಕಳ ರಕ್ಷಣೆ ; ವಿಡಿಯೋ

04:54 PM Aug 23, 2018 | Team Udayavani |

ದೌಸಾ: ಉತ್ತರ ಭಾರತದಲ್ಲೂ ಭಾರೀ ಮಳೆ ಸುರಿಯುತ್ತಿದ್ದು ರಾಜಸ್ಥಾನದ ಕೆಲ ಪ್ರದೇಶಗಳಲ್ಲಿ ಕುಂಭದ್ರೋಣ ಮಳೆ ಸುರಿಯುತ್ತಿದ್ದು ತಗ್ಗು ಪ್ರದೇಶಗಳ ಜಲಾವೃತವಾಗಿವೆ.  ದೌಸಾದಲ್ಲಿ  ಭಾರೀ ಮಳೆಯ ಪರಿಣಾಮ ಅಂಡರ್‌ ಪಾಸ್‌ನಲ್ಲಿ  ತುಂಬಿಕೊಂಡಿದ್ದ ನೀರಿನಲ್ಲಿ  ಸ್ಕೂಲ್‌ ಬಸ್‌ ಅರ್ಧದಷ್ಟು ಮುಳುಗಿ ಹೋಗಿದ್ದು, ಅದೃಷ್ಟವಷಾತ್‌ ಸ್ಥಳೀಯರ ನೆರವಿನಿಂದ ಬಸ್‌ನಲ್ಲಿದ್ದ 30 ಕ್ಕೂ ಹೆಚ್ಚು  ಪುಟ್ಟ ಮಕ್ಕಳು ಪಾರಾಗಿದ್ದಾರೆ. 

Advertisement

ಮಕ್ಕಳು ಅಪಾಯಕ್ಕೆ ಸಿಲುಕಿದ್ದ ವೇಳೆ ತಾವಾಗಿಯೇ ಬಸ್‌ನ ಟಾಪ್‌ ಏರಿದ್ದಾರೆ.ಅಪಾಯವನ್ನು ಗಮನಿಸಿದ ಸ್ಥಳೀಯರು ಕೂಡಲೆ ನೆರವಿಗೆ ಆಗಮಿಸಿ ಎಲ್ಲಾ ಮಕ್ಕಳನ್ನು ರಕ್ಷಿಸಿದ್ದಾರೆ. 

ಈ ಕಾರ್ಯಾಚರಣೆಯ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next