Advertisement

ಶಾಲಾ ಕಟ್ಟಡ ಶಿಥಿಲ; ಭಯದ ನೆರಳಲ್ಲಿ ಬೋಧನೆ

05:47 PM Mar 03, 2021 | Team Udayavani |

ಹೊಳೆನರಸೀಪುರ: ತಾಲೂಕಿನ ಉದ್ದೂರು ಗ್ರಾಮದ ಕಿರಿಯ ಪ್ರಾಥಮಿಕ ಶಾಲಾ ಕಟ್ಟಡ ಸಂಪೂರ್ಣ ಶಿಥಿಲಗೊಂಡು ಯಾವಾಗ ಬೇಕಾದ್ರೂ ಬಿದ್ದು ಹೋಗುವ ಸಾಧ್ಯತೆ ಇದೆ. ಅವಘಡ ಸಂಭವಿಸುವ ಮುನ್ನ ತಾಲೂಕು ಆಡಳಿತವು ಇತ್ತ ಗಮನ ಹರಿಸಿ, ಹಳೇ ಕಟ್ಟಡವನ್ನು ತೆರವು ಮಾಡಿ, ಸುಸಜ್ಜಿತವಾಗಿ ನಿರ್ಮಿಸಬೇಕಿದೆ.

Advertisement

ಈ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದರಿಂದ 5ನೇ ತರಗತಿವರೆಗೆ 45 ವಿದ್ಯಾರ್ಥಿಗಳು ವ್ಯಾಸಂಗಮಾಡುತ್ತಿದ್ದಾರೆ. ಇಬ್ಬರು ಶಿಕ್ಷಕರು ಇದ್ದು, ಪಾಠ ಪ್ರವಚನ ಸುಸೂತ್ರವಾಗಿ ನಡೆಯುತ್ತಿದೆ. ಆದರೆ,ಕೊರತೆ ಇರುವುದು ಶಾಲಾ ಕಟ್ಟಡದ್ದು. ಈಗ ಇರುವಕಟ್ಟಡ ಸಂಪೂರ್ಣವಾಗಿ ಶಿಥಿಲಗೊಂಡಿದೆ. ಗೋಡೆಗಳು ಬಿರುಕು ಬಿಟ್ಟಿವೆ, ಹೆಂಚುಗಳು ಒಡೆದುಹೋಗಿವೆ, ತೊಲೆಗಳು ಬೆಂಡಾಗಿ ಚಾವಣಿ ಕಳಗೆಬಂದಿದೆ. ಕಟ್ಟಡ ಯಾವಾಗ ಬೇಕಾದ್ರೂ ಕುಸಿದು ಬೀಳುವ ಸಾಧ್ಯತೆ ಹೆಚ್ಚಿದೆ.

ಶಾಲೆಗೆ ನುಗ್ಗುತ್ತೆ ಮಳೆ ನೀರು: ಮಳೆಗಾಲ ಬಂತೆಂದರೆ ಸಾಕು ತರಗತಿ ಕೊಠಡಿ ಸಂಪೂರ್ಣಜಲಾವೃತಗೊಳ್ಳುತ್ತದೆ. ಶಾಲಾ ಕಟ್ಟಡದ ತಳಪಾಯ ನೆಲಮಟ್ಟಕ್ಕೆ ಇರುವ ಕಾರಣ, ಮೈದಾನದಲ್ಲಿ ಬಿದ್ದಮಳೆಯ ನೀರು ನೇರವಾಗಿ ಕೊಠಡಿಗೆ ನುಗ್ಗಿ, ಪಾಠಪ್ರವಚನಕ್ಕೆ ತೊಂದರೆ ಆಗುತ್ತಿದೆ. ಒಂದು ವೇಳೆಮಧ್ಯಾಹ್ನವೇ ಮಳೆ ಬಂದರೆ ತರಗತಿಯನ್ನು ಅರ್ಧಕ್ಕೆನಿಲ್ಲಿಸಿ, ಮಕ್ಕಳಿಗೆ ರಜೆ ನೀಡಬೇಕಾದ ಅನಿವಾರ್ಯತೆಯೂ ಸೃಷ್ಟಿ ಆಗಿದೆ.

ಇಚ್ಛಾಶಕ್ತಿ ಪ್ರದರ್ಶಿಸಿ: ಜೊತೆಗೆ, ಈ ಶಾಲೆಗೆ ಸೇರಿದ 36 ಗುಂಟೆ ಭೂಮಿ ಇದ್ದು, ಅದನ್ನು ವಿದ್ಯಾರ್ಥಿಗಳಆಟಕ್ಕೆ ಮೀಸಲಾಗಿದೆ. ಕಟ್ಟಡ ನೆಲ ಕಚ್ಚಿ ಅವಘಡ ಸಂಭವಿಸುವ ಮೊದಲು ಶಿಕ್ಷಣ ಇಲಾಖೆ, ಕ್ಷೇತ್ರ ಪ್ರಭಾವಿ ಶಾಸಕರು, ಜಿಪಂ ಶಿಕ್ಷಣ ಸ್ಥಾಯಿ ಸಮಿತಿಅಧ್ಯಕ್ಷರು ಶಿಥಿಲಗೊಂಡ ಕಟ್ಟಡವನ್ನು ತೆರವುಗೊಳಿಸಿ,ನೂತನ ಕಟ್ಟಡ ನಿರ್ಮಾಣಕ್ಕೆ ಇಚ್ಛಾಶಕ್ತಿ ಪ್ರದರ್ಶಿಸಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಚರ್ಚೆಗೆ ಸೀಮಿತ: ಈ ಶಾಲಾ ಕಟ್ಟಡದ ಬಗ್ಗೆ ತಾಪಂ ಮಾಜಿ ಅಧ್ಯಕ್ಷರು ಹಾಗೂ ಗ್ರಾಮದವರೇ ಆದ ಭಾಗ್ಯಲಕ್ಷ್ಮೀ ಮಾತನಾಡಿ, ಈ ಶಾಲಾ ಕಟ್ಟಡವನ್ನುತೆರವುಗೊಳಿಸುವ ಬಗ್ಗೆ ತಮ್ಮ ಅಧಿಕಾರದ ಅವಧಿಯಲ್ಲಿ ಅನೇಕ ಬಾರಿ ಚರ್ಚಿಸಲಾಗಿತ್ತು. ಆದರೆ,ಅದು ಚರ್ಚೆಯಾಗಿ ಉಳಿಯಿತೇ ಹೊರೆತು, ಪ್ರಯೋಜನ ಕಾಣಲಾಗಲಿಲ್ಲ ಎಂದು ಬೇಸರ ವ್ಯಕ ¤ ಪಡಿಸಿದರು.

Advertisement

ಈ ಬಗ್ಗೆ ಸರ್ಕಾರ ತುರ್ತು ಕ್ರಮಕೈಗೊಳ್ಳದೆಹೋದಲ್ಲಿ ಮುಂದೊಂದು ದಿನ ಪಾಠ ಪ್ರವಚನದವೇಳೆ ಚಾವಣಿ ಕುಸಿದು ಮಕ್ಕಳಿಗೆ ತೊಂದರೆ ಆಗುವಸಂಭವವಿದೆ ಎಂದು ತಮ್ಮ ಆತಂಕ ವ್ಯಕ್ತಪಡಿಸಿದರು.

ಶಾಲೆ ಜಾಗ ಒತ್ತುವರಿ: ಪ್ರಸ್ತುತ ಶಾಲೆಗೆ ಸೇರಿದ ಭೂಮಿಯನ್ನು ಗ್ರಾಮದ ಕೆಲವರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಅವುಗಳನ್ನು ತೆರವುಗೊಳಿಸಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ಇದೆ.ಈಗಿರುವ ಶಾಲೆಯ ಜಾಗವನ್ನು ಸರ್ಕಾರಸರಿಯಾಗಿ ನಿರ್ವಹಿಸದೇ ಹೋದಲ್ಲಿ ಮುಂದೊಂದು ದಿನ ಅದೂ ಒತ್ತುವರಿ ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ. ಒಂದು ವೇಳೆ ಜಾಗ ಒತ್ತುವರಿ ಆದ್ರೆ ಶಾಲೆಯಲ್ಲಿ ವ್ಯಾಸಂಗ ಮಾಡುವ ಮಕ್ಕಳಿಗೆ ಆಟಾಟೋಪಕ್ಕೆ ನಿವೇಶನವೇ ಇಲ್ಲದಂತಾಗುತ್ತದೆ ಎಂದು ಗ್ರಾಮದ ಹಿರಿಯರೊಬ್ಬರು ತಮ್ಮ ಆತಂಕ ವ್ಯಕ್ತಪಡಿಸಿ, ಈ ಬಗ್ಗೆ ನಾವುಗಳು ಪ್ರಶ್ನಿಸಿದರೆ ಗ್ರಾಮದಲ್ಲಿ ಶಾಂತಿ ನೆಮ್ಮದಿಗೆ ಭಂಗ ಬರುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಿದ್ದಾರೆ.

ಕಿರಿಯ ಪ್ರಾಥಮಿಕ ಶಾಲೆ ಮತ್ತು ಆಟದ ಮೈದಾನ ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಗ್ರಾಮದವರಿಗೆ ಇದೆ. ಜೊತೆಗೆ ನೂತನ ಕಟ್ಟಡ ನಿರ್ಮಿಸುವಲ್ಲಿ ಜನಪ್ರತಿನಿಧಿಗಳು, ಶಿಕ್ಷಣ ಇಲಾಖೆ ಗಮನ ಹರಿಸುವುದೇ ಕಾದು ನೋಡಬೇಕಿದೆ.

 

ರಾಧಾಕೃಷ್ಣ ಎನ್‌.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next