Advertisement

ಕಸೌಲಿ : ಸರಕಾರಿ ಮಹಿಳಾ ಅಧಿಕಾರಿಯ ಹತ್ಯೆ : ಸುಪ್ರೀಂ ಕೋರ್ಟ್‌ ಗರಂ

11:44 AM May 02, 2018 | udayavani editorial |

ಹೊಸದಿಲ್ಲಿ : ಸುಪ್ರೀಂ ಕೋರ್ಟ್‌ ಆದೇಶದ ಪ್ರಕಾರ ಅನಧಿಕೃತ ನಿರ್ಮಾಣವನ್ನು ಸೀಲ್‌ ಮಾಡಲು ಹೋಗಿದ್ದ ಮಹಿಳಾ ಸರಕಾರಿ ಅಧಿಕಾರಿಯನ್ನು ಹೊಟೇಲ್‌ ಮಾಲಕನೊಬ್ಬ ಗುಂಡಿಕ್ಕಿ ಕೊಂದು ಕಸೌಲಿ ಪ್ರಕರಣವನ್ನು ಸರ್ವೋಚ್ಚ ನ್ಯಾಯಾಲಯ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು ಸ್ವಯಂ ಪ್ರೇರಿತವಾಗಿ ಕೈಗತ್ತಿಕೊಂಡಿದೆ.

Advertisement

ಜಸ್ಟಿಸ್‌ ಮದನ್‌ ಬಿ ಲೋಕೂರ್‌ ಮತ್ತು ಜಸ್ಟಿಸ್‌ ದೀಪಕ್‌ ಗುಪ್ತಾ ಅವರನ್ನು ಒಳಗೊಂಡ ಪೀಠ, ಕಸೌಲಿ ಹತ್ಯೆ ಪ್ರಕರಣವು ಅತ್ಯಂತ ಗಂಭೀರದ್ದಾಗಿದ್ದು ಸುಪ್ರೀಂ ಕೋರ್ಟ್‌ ಆದೇಶದ ಪ್ರಕಾರ ಅನಧಿಕೃತ ನಿರ್ಮಾಣವನ್ನು ಸೀಲ್‌ ಮಾಡಲು ಹೋಗಿದ್ದ ಮಹಿಳಾ ಅಧಿಕಾರಿಯನ್ನು ಕೊಲ್ಲಲಾಗಿರುವುದು ಕಾನೂನಿನ ವೈಫ‌ಲ್ಯವಾಗಿದೆ ಎಂದು ಹೇಳಿತು. 

ಸಹಾಯಕ ಟೌನ್‌ ಆ್ಯಂಡ್‌ ಕಂಟ್ರಿ ಪ್ಲಾನರ್‌ ಆಗಿರುವ ಶೈಲಬಾಲಾ ಶರ್ಮಾ ಅವರು ಕಸೌಲಿಯ ನಾರಾಯಣೀ ಗೆಸ್ಟ್‌ ಹೌಸ್‌ ಆವರಣದಲ್ಲಿನ ಅನಧಿಕೃತ ನಿರ್ಮಾಣವನ್ನು ಸೀಲ್‌ ಮಾಡಲು ಹೋಗಿದ್ದಾಗ ಹೊಟೇಲ್‌ ಮಾಲಕ ವಿಜಯ್‌ ಸಿಂಗ್‌ ಎಂಬಾತ ಆಕೆಯನ್ನು ಗುಂಡಿಕ್ಕಿ ಸಾಯಿಸಿದ್ದ. ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡಿದ್ದ ಶೈಲಬಾಲಾ ಶರ್ಮಾ ಅವರು ಅನಂತರ ಕೊನೆಯುಸಿರೆಳೆದಿದ್ದರು. 

ಪ್ರಕರಣವನ್ನು ವರಿಷ್ಠ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರ ಮುಂದೆ ನಾಳೆ ಗುರುವಾರ ಇರಿಸಲಾಗುವುದು ಎಂದು ಪೀಠ ಹೇಳಿತು. 

Advertisement

Udayavani is now on Telegram. Click here to join our channel and stay updated with the latest news.

Next