Advertisement

ಎಐಎಡಿಎಂಕೆ ಶಾಸಕರಿಬ್ಬರ ಅನರ್ಹತೆಗೆ ಸುಪ್ರೀಂ ಕೋರ್ಟ್‌ ತಡೆ

08:43 AM May 07, 2019 | Sathish malya |

ಹೊಸದಿಲ್ಲಿ : ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ತಮಿಳು ನಾಡು ಅಸೆಂಬ್ಲಿ ಸ್ಪೀಕರ್‌ ಅವರಿಂದ ಅನರ್ಹತೆ ನೊಟೀಸ್‌ ಪಡೆದಿದ್ದ ಎಐಎಡಿಎಂಕೆ ಪಕ್ಷದ ಇಬ್ಬರು ಶಾಸಕರ ವಿರುದ್ಧದ ಅನರ್ಹತೆ ಕ್ರಮಕ್ಕೆ ಸುಪ್ರೀಂ ಕೋರ್ಟ್‌ ಇಂದು ಸೋಮವಾರ ತಡೆಯಾಜ್ಞೆ ನೀಡಿದೆ.

Advertisement

ಎಐಎಡಿಎಂಕೆ ಶಾಸಕರಾದ ವಿ ಟಿ ಕಲೈಸೆಲ್ವನ್‌ ಮತ್ತು ಇ ರತ್ನಸಭಾಪತಿ ಅವರಿಗೆ ಸ್ಪೀಕರ್‌, ಪಕ್ಷಾಂತರ ನಿಷೇಧ ಕಾನೂನಿನಡಿ ಅನರ್ಹತೆ ನೊಟೀಸ್‌ ಜಾರಿಮಾಡಿದ್ದರು.

ವರಿಷ್ಠ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ಮತ್ತು ಜಸ್ಟಿಸ್‌ ದೀಪಕ್‌ ಗುಪ್ತಾ ಅವರನ್ನು ಒಳಗೊಂಡ ಪೀಠವು ಎಐಎಡಿಎಂಕೆ ಶಾಸಕರಿಬ್ಬರ ಮನವಿಯನ್ನು ಪುರಸ್ಕರಿಸಿ ಅನರ್ಹತಾ ಕ್ರಮ ತಡೆಗೆ ನೊಟೀಸ್‌ ಜಾರಿ ಮಾಡಿತು.

Advertisement

Udayavani is now on Telegram. Click here to join our channel and stay updated with the latest news.

Next