Advertisement

ಕಪ್ಪು ಹಣ ಕಾನೂನಿನ ಪೂರ್ವಾನ್ವಯ: ಸುಪ್ರೀಂ ನಿಂದ ದಿಲ್ಲಿ ಹೈಕೋರ್ಟ್‌ ತಡೆ ತೆರವು

09:23 AM May 22, 2019 | Sathish malya |

ಹೊಸದಿಲ್ಲಿ: 2016ರ ಕಪ್ಪು ಹಣ ಕಾನೂನನ್ನು 2015ರ ಜುಲೈ ಯಿಂದ ಪೂರ್ವಾನ್ವಯ ಗೊಳಿಸಲಾಗದೆಂಬ ದಿಲ್ಲಿ ಹೈಕೋರ್ಟಿನ ಆದೇಶಕ್ಕೆ ಸರ್ವೋಚ್ಚ ನ್ಯಾಯಾಲಯ ಇಂದು ಮಂಗಳವಾರ ತಡೆಯಾಜ್ಞೆ ನೀಡಿದೆ.

Advertisement

ವಿವಿಐಪಿ ಹೆಲಿಕಾಪ್ಟರ್‌ ಹಗರಣದ ಆರೋಪಿ ಗೌತಮ್‌ ಖೈತಾನ್‌ ವಿರುದ್ಧ ಕಪ್ಪು ಹಣ ಕೇಸನ್ನು ದಾಖಲಿಸಲಾಗಿದ್ದು ಆತನ ವಿರುದ್ದದ ಐಟಿ ಅಧಿಕಾರಿಗಳ ಕಾನೂನು ಕ್ರಮಕ್ಕೆ ದಿಲ್ಲಿ ಹೈಕೋರ್ಟ್‌ ನೀಡಿರುವ ಮೇ 16ರ ತಡೆ-ಆದೇಶಕ್ಕೆ ಕೂಡ ಸರ್ವೋಚ್ಚ ನ್ಯಾಯಾಲಯದ ರಜಾ ಕಾಲದ ಪೀಠದ ಮುಖ್ಯಸ್ಥ ಜಸ್ಟಿಸ್‌ ಅರುಣ್‌ ಮಿಶ್ರಾ ಅವರು ತಡೆಯಾಜ್ಞೆ ನೀಡಿದರು.

ಇದೇ ವೇಳೆ ಆರೋಪಿ ಖೈತಾನ್‌ ಗೆ ಕೂಡ ಸುಪ್ರೀಂ ಕೋರ್ಟ್‌ ನೊಟೀಸ್‌ ಜಾರಿ ಮಾಡಿ ಸರಕಾರದ ಮನವಿಗೆ ಆರು ವಾರಗಳ ಒಳಗೆ ಉತ್ತರಿಸುವಂತೆ ಸೂಚಿಸಿತು.

Advertisement

Udayavani is now on Telegram. Click here to join our channel and stay updated with the latest news.

Next