Advertisement

ವಂಚಕರು ದಾಖಲೆಗಳನ್ನು ಕೇಳುತ್ತಾರೆ : ‘ಬಿ ಅಲರ್ಟ್’ ಗ್ರಾಹಕರಿಗೆ ಎಸ್ ಬಿ ಐ ಮನವಿ

12:28 PM Mar 31, 2021 | |

ನವ ದೆಹಲಿ :  ಮರಾಷ್ಟ್ರದ ಅತ್ಯಂತ ದೊಡ್ಡ ಬ್ಯಾಂಕ್ ಎಸ್ ಬಿ ಐ ತನ್ನ ಗ್ರಾಹಕರಿಗೆ ಕೆವೈಸಿ(KYC- Know Your Customer) ಗೆ ಸಂಬಂಧಿಸಿದಂತ ವಂಚಕರ ಕರೆ ಮತ್ತು ಮೆಸೇಜ್ ಗಳ ಬಗ್ಗೆ ಎಚ್ಚರಿಕೆಯನ್ನು ನೀಡಿದೆ‌.

Advertisement

ಕೆವೈಸಿ ಹೆಸರಿನಲ್ಲಿ ಬರುವ ಮೆಸೇಜ್ ಅಥವಾ ಕರೆಗಳಿಗೆ ನಿಮ್ಮ ಯಾವುದೇ ವೈಯಕ್ತಿಕ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳದಂತೆ ಎಸ್ ಬಿ ಐ ತನ್ನ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ.

ಓದಿ : ಏ.1 ರಿಂದ 45 ವರ್ಷ ಮೇಲಿನ ಎಲ್ಲರಿಗೂ ಲಸಿಕೆ: 2000 ಹೆಚ್ಚುವರಿ ಲಸಿಕಾ ಕೇಂದ್ರ: ಸುಧಾಕರ್

ಬ್ಯಾಂಕ್ ಎಂದಿಗೂ ಗ್ರಾಹಕರಲ್ಲಿ ವೈಯಕ್ತಿಕ ದಾಖಲೆಗಳನ್ನು ಕೇಳುವುದಿಲ್ಲ. ಬ್ಯಾಂಕಿನ ಹೆಸರಿನಲ್ಲಿ ಬರುವ ಕರೆ, ಮೆಸೇಜ್ ಗಳ ಬಗ್ಗೆ ಎಚ್ಚರಿಕೆಯಿಂದಿರಿ ಎಂದು ಗ್ರಾಹಕರಿಗೆ ತಿಳಿಸಿದೆ.

ಇನ್ನು, ಮೆಸೇಜ್ ಗಳಲ್ಲಿ ಬರುವ ಯಾವುದೇ ಅಪ್ಲಿಕೇಶನ್ ಡೌನ್‌ ಲೋಡ್ ಮಾಡಬೇಡಿ, ಮೊಬೈಲ್ ನಂಬರ್ ಆಕ್ಟಿವೇಶನ್ ಬಗ್ಗೆ ಕೂಡಲೇ ಎಚ್ಚರಿಕೆ ವಹಿಸುವಂತೆ ಹಾಗೂ ವಂಚಕರಿಂದ ಮೋಸ ಹೋಗಿ ಈಗಾಗಲೇ ಗ್ರಾಹಕರು ತಮ್ಮ ಖಾತೆಯಲ್ಲಿನ  ಹಣ ಕಳೆದುಕೊಂಡಿದ್ದಾರೆ.ಇಂತಹ ವಂಚಕರಿಗೆ ಮೋಸ ಹೋಗಬೇಡಿ. ಜಾಗರೂಕತೆ ವಹಿಸಿ ಎಂದು ಬ್ಯಾಂಕ್ ತನ್ನ ಗ್ರಾಹಕರಿಗೆ ಮನವಿ ಮಾಡಿಕೊಂಡಿದೆ.

Advertisement

ಬ್ಯಾಂಕ್ ಯಾವತ್ತು ತನ್ನ ಗ್ರಾಹಕರ ವೈಯಕ್ತಿಕ ಡಾಟಾ, ಕೆವೈಸಿಯನ್ನು ಕೇಳುವುದಿಲ್ಲ ಎಂದು  ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸ್ಪಷ್ಟಪಡಿಸಿದ್ದು, ಇದು ಹೊಸ ರೀತಿಯ ಆರ್ಥಿಕ ವಂಚನೆ. ಇಂತಹ ಮೋಸದ ಜಾಲ ಹೆಚ್ಚುತ್ತಿರುವ ಹಿನ್ನಲೆಯಲ್ಲಿ, ಎಸ್ ಬಿ ಐ ನ 44.89 ಕೋಟಿ ಗ್ರಾಹಕರು ಯಾವುದೇ ರೀತಿಯಲ್ಲೂ ಖಾಸಗಿ ಡೇಟಾವನ್ನು ಹಂಚಿಕೊಳ್ಳದಂತೆ ಎಚ್ಚರಿಕೆ ನೀಡಿದೆ.

ಇಷ್ಟು ಮಾತ್ರವಲ್ಲದೆ, ವಂಚಕರು ಗ್ರಾಹಕರಿಗೆ ಮತ್ತೆ ಮತ್ತೆ ಸಂದೇಶಗಳನ್ನು ಕಳುಹಿಸುತ್ತಿರುತ್ತಾರೆ. ಈ ಸಂದೇಶದೊಂದಿಗೆ ಒಂದು ಲಿಂಕ್ ಕೂಡಾ ಇರುತ್ತದೆ. ಇದರಲ್ಲಿರುವ ಫಾರ್ಮ್ ಅನ್ನು ಭರ್ತಿ ಮಾಡುವಂತೆ ಗ್ರಾಹಕರಿಗೆ ಸೂಚಿಸಲಾಗುತ್ತದೆ, ಈ ಬಗ್ಗೆ ಎಚ್ಚರಿಕೆ ವಹಿಸಿ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಎಚ್ಚರಿಗೆ ನಿಡಿದೆ.

ಓದಿ : ಶಿರ್ವ ಗ್ರಾ.ಪಂ. ಉಪ ಚುನಾವಣೆ; ಬಿಜೆಪಿ ಬೆಂಬಲಿತ ಅಭ್ಯರ್ಥಿ ಗೆಲುವು

Advertisement

Udayavani is now on Telegram. Click here to join our channel and stay updated with the latest news.

Next