Advertisement

ಸಂಭ್ರಮದ ಸತ್ಯಪ್ರಮೋದ ತೀರ್ಥರ ಆರಾಧನೆ

10:41 AM Nov 09, 2021 | Team Udayavani |

ಜೇವರ್ಗಿ: ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಶ್ರೀರಾಮ ಮಂದಿರದಲ್ಲಿ ಉತ್ತರಾದಿ ಮಠದ ಯತಿ ಶ್ರೀ ಸತ್ಯಪ್ರಮೋದ ತೀರ್ಥರ ಆರಾಧನಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.

Advertisement

ಬೆಳಿಗ್ಗೆ 8:00ಗಂಟೆಗೆ ರಾಮ ದೇವರು ಹಾಗೂ ಸತ್ಯಪ್ರಮೋದ ತೀರ್ಥರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ಮಧ್ಯಾಹ್ನ 1:00ಗಂಟೆಗೆ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ವಿಪ್ರ ಸಮಾಜದ ಮುಖಂಡರಾದ ಲಕ್ಷ್ಮಣರಾವ ಆಲಬಾಳ, ಡಾ| ಗುರುರಾಜ ಜೋಶಿ ಯಡ್ರಾಮಿ, ರಮೇಶಬಾಬು ವಕೀಲ, ಗುರುರಾಜ ಆಲಬಾಳ, ಸುದರ್ಶನ್‌ ಆಲಬಾಳ, ದತ್ತಾತ್ರೆಯರಾವ್‌ ಕುಲಕರ್ಣಿ, ಕೋಳಕೂರ ದತ್ತಾತ್ರೆಯರಾವ್‌ ರೇವನೂರ, ಕಿಶನರಾವ್‌ ಕುಲಕರ್ಣಿ ಹೇಮನೂರ, ಪ್ರದೀಪ ಆಲಬಾಳ, ಅಪ್ಪಾರಾವ ಪಾಟೀಲ ಕೂಟನೂರ, ಶಿವರಾಮ ಜೋಶಿ, ಯಾದವೇಂದ್ರ ಜೋಶಿ, ಹಣಮಂತರಾವ ಕುಲಕರ್ಣಿ ಕೂಟನೂರ, ಮನೋಜ ಕುಲಕರ್ಣಿ, ನಾರಾಯಣ ನೀಲೂರ, ಶ್ರೀಪಾದರಾವ್‌ ಯರಗಲ್‌, ಪವನಾಚಾರ್ಯ ಜೋಶಿ, ಶ್ರೀನಿವಾಸ ಮಳ್ಳಿ, ನಟರಾಜ ಕುಲಕರ್ಣಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next