Advertisement

ಶತ್ರುಗಳಿಗೂ ಒಳ್ಳೆಯವನಾದ ಸತೀಶ್‌ ನೀನಾಸಂ

06:45 PM Nov 13, 2017 | |

ಸತೀಶ್‌ ನೀನಾಸಂ, ತಮ್ಮ ಸತೀಶ್‌ ಪಿಕ್ಚರ್‌ ಹೌಸ್‌ನಿಂದ “ರಾಮನು ಕಾಡಿಗೆ ಹೋದನು’ ಎಂಬ ಚಿತ್ರವನ್ನು ನಿರ್ಮಿಸುತ್ತಿರುವ ವಿಷಯ ಗೊತ್ತಿರಬಹುದು. ಈಗ ಆ ಚಿತ್ರದ ಮೊದಲ ಪೋಸ್ಟರ್‌ ಬಿಡುಗಡೆಯಾಗಿದೆ. ಆದರ್ಶ್‌ ಎನ್ನುವವರು ಈ ಪೋಸ್ಟರ್‌ ರೂಪಿಸಿದ್ದು, ಈ ಪೋಸ್ಟರ್‌ಗೆ ಎಲ್ಲಾ ಕಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. 

Advertisement

“ರಾಮನು ಕಾಡಿಗೆ ಹೋದನು’ ಚಿತ್ರವನ್ನು ವಿಕಾಸ್‌ ಪಂಪಾಪತಿ ಮತ್ತು ವಿನಯ್‌ ಪಂಪಾಪತಿ ಜೊತೆಯಾಗಿ ನಿರ್ಮಿಸುತ್ತಿದ್ದಾರೆ. ಪ್ರೀತಮ್‌ ತೆಗ್ಗಿನಮನೆ ಛಾಯಾಗ್ರಹಣ ಮಾಡಿದರೆ, ಮಿಥುನ್‌ ಮುಕುಂದನ್‌ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು ಅವರ ಹುಡುಕಾಟ ನಡೆಯುತ್ತಿದೆ.

ಸದ್ಯಕ್ಕೆ ಸತೀಶ್‌ ನೀನಾಸಂ ಜೊತೆಗೆ ಅಚ್ಯುತ್‌ ಕುಮಾರ್‌ ನಟಿಸುತ್ತಿದ್ದು, ಮಿಕ್ಕ ಕಲಾವಿದರ ಆಯ್ಕೆ ನಡೆಯುತ್ತಿದೆ. ಚಿತ್ರದ ಚಿತ್ರೀಕರಣ ಡಿಸೆಂಬರ್‌ ಎರಡನೇ ವಾರದಲ್ಲಿ ಪ್ರಾರಂಭವಾಗಲಿದ್ದು, “ಅಯೋಗ್ಯ’ ಮತ್ತು “ರಾಮನು ಕಾಡಿಗೆ ಹೋದನು’ ಚಿತ್ರದ ಚಿತ್ರೀಕರಣ ಜೊತೆಜೊತೆಯಾಗಿ ಸಾಗಲಿದೆಯಂತೆ.

ಈ ಮಧ್ಯೆ ಸತೀಶ್‌ ಅಭಿನಯದ “ಚಂಬಲ್‌’ ಬಿಡುಗಡೆಗೆ ಸಿದ್ಧವಾಗುತ್ತಿದ್ದರೆ, “ಗೋಧ್ರಾ’ ಚಿತ್ರದ ಟಾಕಿ ಭಾಗದ ಚಿತ್ರೀಕರಣ ಮುಗಿದಿದೆಯಂತೆ. ಇನ್ನು ಸತೀಶ್‌ ಅಭಿನಯದ ತಮಿಳು ಚಿತ್ರವು ಜನವರಿಯಿಂದ ಶುರುವಾಗುವುದಾಗಿ ಅವರು ಹೇಳುತ್ತಾರೆ.

Advertisement

ಈ ಚಿತ್ರವನ್ನು ಅನೀಸ್‌ ಎನ್ನುವವರು ನಿರ್ದೇಶಿಸುತ್ತಿದ್ದು, ಚಿತ್ರಕ್ಕೆ “——-‘ ಎಂದು ಹೆಸರಿಡಲಾಗಿದೆ. ಅಂದರೆ, “ಶತ್ರುಗಳಿಗೂ ಒಳ್ಳೆಯವನು’ ಎಂದರ್ಥ. ಈ ಚಿತ್ರದ ಕಲಾವಿದರು ಮತ್ತು ತಂತ್ರಜ್ಞರು ಇನ್ನಷ್ಟೇ ಪಕ್ಕಾ ಆಗಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next