Advertisement

 ಸಾಸ್ತಾನ ಬಸ್‌ ನಿಲ್ದಾಣ ಮಳೆಗಾಲದಲ್ಲಿ  ಸದಾ ಜಲಾವೃತ

04:12 PM Jul 08, 2018 | Team Udayavani |

ಕೋಟ: ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಜೋರಾಗಿ  ಮಳೆ ಬಂದರೆ ಸಾಸ್ತಾನ ಬಸ್‌ ನಿಲ್ದಾಣ ಸಂಪೂರ್ಣವಾಗಿ ಜಲಾವೃತಗೊಳ್ಳುತ್ತದೆ. ಹೀಗಾಗಿ ಮಳೆಗಾಲದ ಬಹುತೇಕ ದಿನ ಇಲ್ಲಿ ಪ್ರಯಾಣಿಕರು ರಸ್ತೆಯಲ್ಲಿ ನಿಂತು ಬಸ್‌ ಕಾಯುವ ಸ್ಥಿತಿ ಎದುರಾಗಿದೆ. ಇದರಿಂದ ಶಾಲೆಗಳಿಗೆ ತೆರಳುವ ವಿದ್ಯಾರ್ಥಿಗಳು ಹಾಗೂ ಸ್ಥಳೀಯರಿಗೆ  ಸಮಸ್ಯೆಯಾಗುತ್ತಿದೆ.

Advertisement

ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಸಂದರ್ಭ ಚರಂಡಿ, ಸರ್ವಿಸ್‌ ರಸ್ತೆ ಸರಿಯಾಗಿ ಮಾಡದಿರುವುದರಿಂದ ಮತ್ತು ಪರಿಹಾರ ಪಡೆದವರು ಕಟ್ಟಡ ತೆರವುಗೊಳಿಸ ದಿರುವುದರಿಂದ ನೀರು ಹರಿಯಲು ವ್ಯವಸ್ಥೆ ಇಲ್ಲದೆ ಈ ಸಮಸ್ಯೆ ಎದುರಾಗಿದೆ. 

ಜನಪ್ರತಿನಿಧಿಗಳು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಕಾಮಗಾರಿಯ ಗುತ್ತಿಗೆ ಪಡೆದ ನವಯುಗ ಕಂಪೆನಿಯವರು ಈ ಕುರಿತು ಕ್ರಮ ಕೈಗೊಂಡು ಸಮಸ್ಯೆ ಬಗೆಹರಿಸಬೇಕು ಎನ್ನುವುದು ಸಾರ್ವಜನಿಕರ ಆಗ್ರಹ.

Advertisement

Udayavani is now on Telegram. Click here to join our channel and stay updated with the latest news.

Next