Advertisement

ಶಶಿಕಲಾ ಎಐಎಡಿಎಂಕೆಯ ಸ್ವಯಂಘೋಷಿತ ಪ್ರಧಾನ ಕಾರ್ಯದರ್ಶಿ!

07:50 PM Oct 17, 2021 | Team Udayavani |

ಚೆನ್ನೈ: ಶನಿವಾರವಷ್ಟೇ ಚೆನ್ನೈನ ಮರೀನಾ ಬೀಚ್‌ನಲ್ಲಿರುವ, ಎಐಎಡಿಎಂಕೆ ಪಕ್ಷದ ಸಂಸ್ಥಾಪಕ ಎಂ.ಜಿ. ರಾಮಚಂದ್ರನ್‌, ಪಕ್ಷದ ಅಧಿನಾಯಕಿ ಜಯಲಲಿತಾರ ಸಮಾಧಿಗಳಿಗೆ ಪುಷ್ಪನಮನ ಸಲ್ಲಿಸಿದ್ದ, ಎಐಎಡಿಎಂಕೆ ಉಚ್ಚಾಟಿತ ನಾಯಕಿ ಶಶಿಕಲಾ, ಭಾನುವಾರ ಮತ್ತೊಂದು”ರಾಜಕೀಯ ಹೆಜ್ಜೆ’ಯಿಟ್ಟಿದ್ದಾರೆ.

Advertisement

ಚೆನ್ನೈನ ಟಿ.ನಗರ್‌ನಲ್ಲಿರುವ ಎಂ.ಜಿ.ಆರ್‌. ಸ್ಮಾರಕದಲ್ಲಿ ಅವರು ನಾಮಫ‌ಲಕವೊಂದನ್ನು ಅನಾವರಣಗೊಳಿಸಿದ್ದು, ಅದರಲ್ಲಿ ಶಶಿಕಲಾರನ್ನು ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಎಂದು ಬರೆಯಲಾಗಿದೆ. ಈ ವೇಳೆ, ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು, “”ಪಕ್ಷದ ಒಳಿತಾಗಿ ಎಐಎಂಡಿಎಂಕೆಯ ಎಲ್ಲರೂ ಒಗ್ಗೂಡುವ ಅವಶ್ಯಕತೆಯಿದೆ” ಎಂದಿದ್ದಾರೆ.

ಇದು, ಅವರು ಸಕ್ರಿಯ ರಾಜಕಾರಣಕ್ಕೆ ಮರುಪ್ರವೇಶಿಸುತ್ತಿರುವ ಬಗ್ಗೆ ಖಚಿತ ಸಂದೇಶವನ್ನು ರವಾನಿಸಿದೆ. ಜೊತೆಗೆ, ಪಕ್ಷವನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡಿರುವ ಮಾಜಿ ಸಿಎಂ ಪಳನಿಸ್ವಾಮಿ, ಪನೀರ್‌ ಸೆಲ್ವಂ ಅವರಿಗೆ ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ನೆನಪು ಮಾಡಿಕೊಡಲು ಪ್ರಯತ್ನಿಸಿದ್ದಾರೆ.

ಶಶಿಕಲಾರ ನಡೆಯನ್ನು ಟೀಕಿಸಿರುವ ಎಐಎಡಿಎಂಕೆ ನಾಯಕರು ಶನಿವಾರ ಎಂಜಿಆರ್‌ ಸ್ಮಾರಕದಲ್ಲಿ ಶಶಿಕಲಾ ಎಐಎಡಿಎಂಕೆಯ ಬಾವುಟ ಹಾರಿಸಿದ್ದು, ಹಾಗೆ ಮಾಡಲು ಅವರಿಗೆ ಯಾವುದೇ ಹಕ್ಕಿಲ್ಲ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next