Advertisement

ಸುಪ್ರೀಂ ತೀರ್ಪು ಬರಲಿ, ಖುಷಿಯಿಂದ ಜಾಗ ಖಾಲಿ ಮಾಡ್ತೇವೆ: ಶಶಿಕಲಾ

09:31 PM Feb 13, 2017 | Sharanya Alva |

ಚೆನ್ನೈ:ಅಕ್ರಮ ಆದಾಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮಂಗಳವಾರ ತೀರ್ಪು ಪ್ರಕಟಿಸಲಿ ನಂತರ ನಾನು ಮತ್ತು ಶಾಸಕರುಗಳು ರೆಸಾರ್ಟ್ ಅನ್ನು ಖುಷಿಯಿಂದ ತೊರೆಯಲಿದ್ದೇವೆ ಎಂದು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿಕೆ ಶಶಿಕಲಾ ನಟರಾಜನ್ ಸೋಮವಾರ ರಾತ್ರಿ ತಿಳಿಸಿದ್ದಾರೆ.

Advertisement

ಮಾಜಿ ಸಿಎಂ,ದಿ.ಜಯಾ ಪ್ರಕರಣದ ಜೊತೆ ತಳುಕು ಹಾಕಿಕೊಂಡಿರುವ ಪ್ರಕರಣದಲ್ಲಿ ಶಶಿಕಲಾ ಆರೋಪಿಯಾಗಿದ್ದಾರೆ. ಹಾಗಾಗಿ ಮಂಗಳವಾರ ಸುಪ್ರೀಂಕೋರ್ಟ್ ನೀಡಲಿರುವ ತೀರ್ಪು ಶಶಿಕಲಾ ಪಾಲಿಗೆ ಅಗ್ನಿಪರೀಕ್ಷೆಯಾಗಿದೆ.  

ಕೋವತ್ತೂರಿನ ಗೋಲ್ಡನ್ ಬೇ ರೆಸಾರ್ಟ್ ನಲ್ಲಿ ಸುಮಾರು 100ಕ್ಕೂ ಅಧಿಕ ಶಾಸಕರನ್ನು ಉದ್ದೇಶಿಸಿ ಶಶಿಕಲಾ ಮಾತನಾಡಿರುವುದಾಗಿ ಮಾಧ್ಯಮದ ವರದಿ ವಿವರಿಸಿದೆ. ಮಂಗಳವಾರ ಬೆಳಗ್ಗೆ 10.30ರ ಹೊತ್ತಿಗೆ ಸುಪ್ರೀಂಕೋರ್ಟ್ ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದ ಬಗ್ಗೆ ಸುಪ್ರೀಂಕೋರ್ಟ್ ತೀರ್ಪನ್ನು ಪ್ರಕಟಿಸಲಿದೆ.

ಸುಪ್ರೀಂಕೋರ್ಟ್ ಮಂಗಳವಾರ ತೀರ್ಪನ್ನು ಪ್ರಕಟಿಸಲಿ, ಬಳಿಕ ನಾವು ರೆಸಾರ್ಟ್ ನಿಂದ ಖುಷಿಯಿಂದ ಹೊರಡೋಣ ಎಂದು ಹೇಳಿದಾಗ, ಶಾಸಕರುಗಳು ನೀವು ಈ ಪ್ರಕರಣದಲ್ಲಿ ಜಯಶಾಲಿಯಾಗುತ್ತೀರಿ ಎಂದು ಒಕ್ಕೊರಲಿನಿಂದ ಹೇಳಿರುವುದಾಗಿ ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next