Advertisement

ಬನಶಂಕರಿದೇವಿಗೆ ಸೀರೆ ಅರ್ಪಣೆ

09:23 PM Jan 15, 2022 | Team Udayavani |

ಕಂಪ್ಲಿ: ಬಾದಾಮಿ ಬನಶಂಕರಿದೇವಿಗೆ ದೇವಾಂಗ ಸಮಾಜದಿಂದ ಪೀತಾಂಬರ ಸೀರೆ ಅರ್ಪಿಸುವ ಪದ್ಧತಿಯಂತೆ ಶ್ರದ್ಧಾಭಕ್ತಿಗಳಿಂದ ಸೀರೆ ಅರ್ಪಿಸಲಾಗುವುದು ಎಂದು ಹಂಪಿ ಗಾಯತ್ರಿ ಪೀಠದ ಅಖೀಲ ಭಾರತ ದೇವಾಂಗ ಸಮಾಜದ ಜಗದ್ಗುರು ಶ್ರೀ ದಯಾನಂದಪುರಿ ಮಹಾಸ್ವಾಮಿಗಳು ಹೇಳಿದರು.

Advertisement

ಹಂಪಿ ಗಾಯತ್ರಿಪೀಠದಿಂದ ಬನಶಂಕರಿ ಕ್ಷೇತ್ರಕ್ಕೆ ಪಲ್ಲಕ್ಕಿಯೊಂದಿಗೆ ಯಾತ್ರೆ ಮೂಲಕ ಬನಶಂಕರಿಗೆ ದೇವಿಗೆ ಬಾಗಿನ ಮತ್ತು ಪೀತಾಂಬರ ಸೀರೆ ಸಮರ್ಪಿಸಲು ತಾಲೂಕಿನ ನಂ.10ಮುದ್ದಾಪುರ ಗ್ರಾಮದಿಂದ ಶುಕ್ರವಾರ ಆರಂಭಗೊಂಡ ಯಾತ್ರೆ ಇಲ್ಲಿನ ದೇವಾಂಗ ಸಮಾಜದ ಗದ್ದೆ ಚೌಡೇಶ್ವರಿ ದೇವಸ್ಥಾನ ಆವರಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿ, ದೇವಾಂಗ ಸಮಾಜವು ದೇವ ಮಾನವರಿಗೆ ವಸ್ತ್ರ ಕೊಟ್ಟ ಸಮಾಜವಾಗಿದ್ದು, ದೇವಾಂಗದವರ ಕುಲದೇವತೆ ಬನಶಂಕರಿಗೆ ಮಡಿಯಿಂದ ನೇಯ್ದ ಸೀರೆಯನ್ನು ಪ್ರತಿ ಪುಷ್ಯ ಪೂರ್ಣಮಿಯಂದು ಸಲ್ಲಿಸುವ ಸಂಪ್ರದಾಯವಿದೆ.

ಕೊರೊನಾ ಹಿನ್ನೆಲೆಯಲ್ಲಿ ಪಾದಯಾತ್ರೆ ಕೈಬಿಟ್ಟು ವಾಹನ ಮೂಲಕ ತೆರಳಲಾಗುತ್ತಿದೆ. ಹಂಪಿ ಪಾದಯಾತ್ರೆ ಸೇವಾ ಸಮಿತಿ ಅಧ್ಯಕ್ಷ ರವೀಂದ್ರ ಕಲಬುರ್ಗಿ, ಸಂಚಾಲಕ ಪರಗಿ ನಾಗರಾಜ್‌, ದೇವಾಂಗಮಠದ ಸಾವಿತ್ರಮ್ಮ, ದೇವಾಂಗ ಸಮಾಜ ಸಂಘ, ಬನಶಂಕರಿ ದೇವಿ ದೇವಾಂಗ ಮಹಿಳಾ ಸಂಘ, ಗದ್ದೆ ಚೌಡೇಶ್ವರಿದೇವಿ ದೇವಸ್ಥಾನ ಸೇವಾ ಸಮಿತಿ ಪದಾ ಧಿಕಾರಿಗಳು, ದೇವಾಂಗ ಸಮಾಜದವರು, ಸರ್ವ ಸಮುದಾಯಗಳ ಸದ್ಭಕ್ತರು ಪಾಲ್ಗೊಂಡಿದ್ದರು

 

 

Advertisement
Advertisement

Udayavani is now on Telegram. Click here to join our channel and stay updated with the latest news.

Next