Advertisement

Sargur; ಹಾಡಹಗಲೇ ಸಾಕು ಪ್ರಾಣಿಗಳ ಬೇಟೆಗೆ ಮುಂದಾದ ಹುಲಿ

04:41 PM Dec 21, 2023 | Team Udayavani |

ಮೈಸೂರು : ಹುಲಿಯೊಂದು ಹಾಡಹಗಲೇ ಸಾಕು ಪ್ರಾಣಿಗಳ ಬೇಟೆಗೆ ಮುಂದಾದ ಘಟನೆ ಸರಗೂರು ತಾಲೂಕಿನ ಜಯಲಕ್ಷ್ಮೀಪುರ ಗ್ರಾಮದಲ್ಲಿ ನಡೆದಿದೆ.

Advertisement

ಜಮೀನೊಂದರಲ್ಲಿ ಕಾಣಿಸಿಕೊಂಡ ಹುಲಿಯೊಂದು ಕುರಿ, ಮೇಕೆಯಂತಹ ಜಾನುವಾರುಗಳ ಮೇಲೆರಗಲು ಹೊಂಚು ಹಾಕಿದ್ದು, ಭಾರೀ ಗಾತ್ರದ ಹುಲಿಯ ಚಲನವಲನ ದನಗಾಹಿಯೊಬ್ಬರ ಮೊಬೈಲ್‌ ಕೆಮರಾದಲ್ಲಿ ಸೆರೆಯಾಗಿದೆ.

ಜಯಲಕ್ಷ್ಮೀಪುರ ಗ್ರಾಮ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಗೆ ಸೇರಿದ್ದು, ಹೊಂಚು ಹಾಕಿದ ಹುಲಿಯನ್ನು ಕಂಡು ರೈತರು ಭಯಭೀತರಾಗಿದ್ದಾರೆ.

ಜಯಲಕ್ಷ್ಮಿಪುರ, ಅಳಲಹಳ್ಳಿ ಯಶವಂತಪುರ, ಎತ್ತಿಗೆ, ಸುತ್ತಮುತ್ತಲ ಗ್ರಾಮಗಳ ಜನರಲ್ಲಿ ಆತಂಕ ಮನೆ ಮಾಡಿದ್ದು,ಹುಲಿ ಸೆರೆ ಹಿಡಿಯುವಂತೆ ದನಗಾಹಿ ಮತ್ತು ರೈತರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next