Advertisement

ಅರಣ್ಯ ಇಲಾಖೆಯಿಂದ ಸಸಿಗಳ ವಿತರಣೆಗೆ ಸಿದ್ಧತೆ: ಜಗನ್ನಾಥ್‌

08:04 AM May 29, 2020 | Suhan S |

ಮೂಡಿಗೆರೆ: ತಾಲೂಕಿನ ರೈತರು ಹಾಗೂ ಸಾರ್ವಜನಿಕರಿಗೆ ವಿತರಿಸಲು ಅರಣ್ಯ ಇಲಾಖೆಯಿಂದ ಸುಮಾರು 1.95 ಲಕ್ಷ ಗಿಡಗಳು ಸಿದ್ಧವಾಗಿದ್ದು, ಜೂನ್‌ ಒಂದರಿಂದ ಸಸಿಗಳ ವಿತರಣಾ ಕಾರ್ಯ ಪ್ರಾರಂಭವಾಗಲಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿ ಕಾರಿ ಜಗನ್ನಾಥ್‌ ತಿಳಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಳೇಕೋಟೆ ಹಾಗೂ ಅಂಗಡಿ ಗ್ರಾಮಗಳ ಸಸ್ಯ ಕೇಂದ್ರಗಳಲ್ಲಿ ನೇರಳೆ, ಬೀಟೆ, ಮಹಾಗನಿ, ಸಂಪಿಗೆ ತಾರೆ, ಬಿದಿರು, ಶ್ರೀಗಂಧ, ಬೈನೆ, ಹಣ್ಣಿನ ಗಿಡಗಳಾದ ಹೆಬ್ಬಲಸು, ಮಾವು, ನೇರಳೆ, ನೆಲ್ಲಿ ಸೇರಿದಂತೆ ವಿವಿಧ ತಳಿಗಳ ಗಿಡಗಳನ್ನು ಬೆಳೆಸಲಾಗಿದೆ. ಮಗುವಿಗೊಂದು ಮರ, ಶಾಲೆಗೊಂದು ವನ ಯೋಜನೆಯಡಿ 2230 ಗಿಡಗಳನ್ನು ನೀಡಲಾಗುತ್ತದೆ. ಹಸಿರು ಕರ್ನಾಟಕ ಯೋಜನೆಯಡಿ ಗ್ರಾಮೀಣ ಪ್ರದೇಶಗಳ ಮನೆಗಳಿಗೆ 19800 ಸಸಿಗಳನ್ನು ನೀಡಲಾಗುತ್ತದೆ. ರೈತರು ಹಾಗೂ ಸಾರ್ವಜನಿಕರಿಗಾಗಿ 78400 ಗಿಡಗಳನ್ನು ಹಾಗೂ ಕಾವೇರಿ ಕೂಗು ಯೋಜನೆ ಅಡಿ ಕಾವೇರಿ ನದಿಯ ಉಪನದಿಗಳ ಪ್ರದೇಶಗಳಲ್ಲಿ 95 ಸಾವಿರ ಗಿಡಗಳನ್ನು ನೀಡಲು ನಿರ್ಧರಿಸಲಾಗಿದೆ ಎಂದರು.

ರೈತರ ಜಮೀನನಿನಲ್ಲಿ ಸರ್ಕಾರ ರಿಯಾಯಿತಿ ದರದಲ್ಲಿ ಗಿಡ ನೀಡಲು ನಿರ್ಧರಿಸಿದೆ. ರೈತರು ಸಸ್ಯ ಕ್ಷೇತ್ರದಲ್ಲಿ ಇರುವ ಪುಸ್ತಕದಲ್ಲಿ ಅಗತ್ಯ ದಾಖಲೆ ನೀಡಿ ನೋಂದಾಯಿಸಿಕೊಳ್ಳಬೇಕು ಎಂದರು. ಈ ವೇಳೆ ವಲಯ ಅರಣ್ಯ ಅಧಿಕಾರಿ ಮೋಹನ್‌, ಉಪ ವಲಯ ಅರಣ್ಯ ಅಧಿಕಾರಿ ರಮೇಶ್‌, ಚಿದಾನಂದ್‌, ಅರಣ್ಯ ರಕ್ಷಕ ರಮೇಶ್‌, ಸಸ್ಯ ಕ್ಷೇತ್ರಪಾಲಕ ಚಂದ್ರಯ್ಯ, ಚಾಲಕ ತಿಪ್ಪೇಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next