Advertisement

Thief: ಸಾಣೂರು ಮನೆಗೆ ನುಗ್ಗಿ ಕಳ್ಳತನ

08:27 PM Apr 05, 2023 | Team Udayavani |

ಕಾರ್ಕಳ: ಸಾಣೂರು ಗ್ರಾಮದ ಕರಿಯಕಲ್‌ ಎಂಬಲ್ಲಿ ಮನೆಯೊಂದಕ್ಕೆ ನುಗ್ಗಿದ ಕಳ್ಳರು ವಾಚ್‌ ಕದ್ದೊಯ್ದ ಘಟನೆ ಎ. 4ರಂದು ನಡೆದಿದೆ.
ಶಬಾನ ಮಂಜಿಲ್‌ ಎಂಬವರು ಅನಾರೋಗ್ಯದ ನಿಮಿತ್ತ ಮಂಗಳೂರು ಕೆಎಂಸಿ ಆಸ್ಪತ್ರೆಗೆ ಪತಿಯನ್ನು ಕರೆದುಕೊಂಡು ಹೋಗಿದ್ದು, ಮರಳಿ ಮನೆಗೆ ಬಂದಾಗ ಮನೆಯ ಮುಂದಿನ ಬಾಗಿಲು ತೆರೆದಿದ್ದು ಮನೆಯೊಳಗೆ ಹೋಗಿ ನೋಡಿದಾಗ ಎರಡು ಕೋಣೆಯಲ್ಲಿನ ಎರಡು ಕಪಾಟುಗಳನ್ನು ಯಾವುದೋ ಆಯುಧದಿಂದ ಮೀಟಿ ತೆರೆದಿದ್ದು ಕಪಾಟಿನಲ್ಲಿದ್ದ 1 ವಾಚ್‌ ಕಳವುಗೈದಿರುವುದು ಬೆಳಕಿಗೆ ಬಂದಿದೆ. ಕಪಾಟಿನಲ್ಲಿದ್ದ ಸೊತ್ತುಗಳು ಚೆಲ್ಲಾಪಿಲ್ಲಿಯಾಗಿದ್ದವು, ಕಳವಾದ ವಾಚ° ಅಂದಾಜು ಮೌಲ್ಯ ರೂಪಾಯಿ 10 ಸಾವಿರ ರೂ. ಆಗಿದೆ. ಕಾರ್ಕಳ ನಗರ ಪೊಲೀಸ್‌ ಠಾಣೆ ಪ್ರಕರಣ ದಾಖಲಾಗಿದೆ

Advertisement
Advertisement

Udayavani is now on Telegram. Click here to join our channel and stay updated with the latest news.

Next