Advertisement

“ನೀವು ಹೇಳಿದಂತೆ ಕೆಲಸ ಮಾಡಲು ಸಿದ್ದ” ಕೆಲಸ ಕೇಳಿ ಬಿಸಿಸಿಐಗೆ ಪತ್ರ ಬರೆದ ಸಂಜಯ್ ಮಾಂಜ್ರೇಕರ್

03:21 PM Aug 01, 2020 | keerthan |

ಮುಂಬೈ: ಟೀಂ ಇಂಡಿಯಾ ಮಾಜಿ ಆಟಗಾರ ಸಂಜಯ್ ಮಾಂಜ್ರೇಕರ್ ಕೆಲಸ ಕೇಳಿ ಟೀಂ ಇಂಡಿಯಾಗೆ ಪತ್ರ ಬರೆದಿದ್ದಾರೆ. ಬಿಸಿಸಿಐನ ಮಾರ್ಗಸೂಚಿಯ ಪ್ರಕಾರ ವೀಕ್ಷಕ ವಿವರಣೆ ಮಾಡಲು ಸಿದ್ದ ಎಂದು ಮಾಂಜ್ರೇಕರ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Advertisement

ಕಳದ ವರ್ಷದ ಏಕದಿನ ವಿಶ್ವಕಪ್ ಸೋಲಿನ ನಂತರ ಟೀಂ ಇಂಡಿಯಾ ಆಟಗಾರ ರವೀಂದ್ರ ಜಡೇಜಾ ಅವರೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವಾಗ್ವಾದ ನಡೆಸಿ ಸುದ್ದಿಯಾಗಿದ್ದರು, ಇಂತಹ ಘಟನೆಗಳ ನಂತರ ಸಂಜಯ್ ಮಾಂಜ್ರೇಕರ್ ಅವರನ್ನು ಬಿಸಿಸಿಐ ತನ್ನ ಕಾಮೆಂಟ್ರಿ ಪ್ಯಾನೆಲ್ ನಿಂದ ಕಿತ್ತೆಸೆದಿತ್ತು.

ಟೀಂ ಇಂಡಿಯಾದ ಕೆಲ ಆಟಗಾರರಿಗೆ ತನ್ನ ಕಾಮೆಂಟರಿಯಿಂದ ತೊಂದರೆಯಾಗಿದೆ. ಹೀಗಾಗಿ ವಜಾ ಮಾಡಿದ್ದಾರೆ ಎಂದು ಮಾಂಜ್ರೇಕರ್ ನಂತರ ಹೇಳಿದ್ದರು.

ಸದ್ಯ ಐಪಿಎಲ್ ಆರಂಭಕ್ಕೆ ತಯಾರಿ ನಡೆಸುತ್ತಿದ್ದಂತೆ ಸಂಜಯ್ ಮಾಂಜ್ರೇಕರ್ ಪತ್ರ ಬರೆದಿದ್ದಾರೆ. ಕಳೆದ ಬಾರಿ ಇದರ ಬಗ್ಗೆ ಇಷ್ಟೊಂದು ಸ್ಪಷ್ಟತೆ ಇರಲಿಲ್ಲ. ಹೀಗಾಗಿ ಈ ಬಾರಿ ಮಾರ್ಗಸೂಚಿಯ ಪ್ರಕಾರ ಕೆಲಸ ಮಾಡಲು ಸಿದ್ದನಿದ್ದೇನೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next