Advertisement

ಈರುಳ್ಳಿ ಬೆಳೆ ನಷ್ಟ : ಪರಿಹಾರಕ್ಕೆ ಮನವಿ

01:21 PM Jun 27, 2020 | Naveen |

ಸಂಡೂರು: ತಾಲೂಕಿನಾದ್ಯಂತ ಬೆಳೆದ ಈರುಳ್ಳಿ ಬೆಳೆ ನಷ್ಟವಾಗಿದೆ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ರೈತರಿಗೂ ಸಹ ಕಾರ್ಮಿಕರ ಕೊರತೆ ಮತ್ತು ಮಾರುಕಟ್ಟೆಯ ಸಮಸ್ಯೆಯಿಂದ ತೊಂದರೆಯಾಗಿದ್ದು, ಹಿಂಗಾರು ಹಾಗೂ ಮುಂಗಾರು ಬೆಳೆಯ ಸರಿಯಾದ ಸಮೀಕ್ಷೆ ಮಾಡುವ ಮೂಲಕ ಈರುಳ್ಳಿ ಬೆಳೆ ಪರಿಹಾರ ಕೊಡಬೇಕು ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಬಿ.ಎಂ. ಉಜ್ಜಿನಯ್ಯ ಒತ್ತಾಯಿಸಿದರು.

Advertisement

ಪಟ್ಟಣದ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ ಅವರಿಗೆ ಬೆಳೆ ಪರಿಹಾರಕ್ಕಾಗಿ ಮನವಿ ಸಲ್ಲಿಸಿ ಮಾತನಾಡಿದ ಅವರು, ರೈತರು ಸಾಲ ಮಾಡಿ ಈರುಳ್ಳಿ ಬೆಳೆದರು. ಅಲ್ಲದೆ ಎಕರೆಗೆ 50 ರಿಂದ 60 ಸಾವಿರ ರೂ. ಖರ್ಚು ಮಾಡಿದ್ದಾರೆ. ಮಾರುಕಟ್ಟೆಯ ಕೊರತೆಯಿಂದ ಬೆಳೆದ ಬೆಳೆ ನಷ್ಟವಾಗಿ ವಿಪರೀತ ತೊಂದರೆ ಅನುಭವಿಸಿದ್ದಾರೆ ಎಂದರು.

ರೈತ ಶಂಕ್ರಪ್ಪ ಮಾತನಾಡಿ, ಈರುಳ್ಳಿ ಕಟಾವು ಮಾಡುವ ವೇಲೆ ಲಾಕ್‌ಡೌನ್‌ ಅಗಿದ್ದು ಬೆಳೆ ಹೊಲದಲ್ಲಿಯೇ ಕೊಳೆತು ಹೋಗಿದೆ. ಇದರಿಂದ ರೈತರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ತಾಲೂಕಿನ ಎಲ್ಲಾ ಈರುಳ್ಳಿ ಬೆಳೆಗಾರರಿಗೆ ಹಿಂಗಾರು, ಮುಂಗಾರು ಎನ್ನದೆ ಪರಿಹಾರ ಕೊಡಬೇಕು ಎಂದು ಮನವಿ ಮಾಡಿದರು. ರೈತರಾದ ಶಂಕ್ರಪ್ಪ, ಕೆ.ಶ್ರೀಕಾಂತ, ಟಿ.ಜಗದೀಶ್‌, ಜಿ.ಕರಿಬಸಪ್ಪ, ಬಿ.ಎಂ.ಉಜ್ಜಿನಯ್ಯ ಇತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next