Advertisement

ಮರು ಬಿಡುಗಡೆಯತ್ತ ಸಿನಿಮಾಗಳು

01:14 PM Oct 09, 2020 | Suhan S |

ಚಿತ್ರಮಂದಿರಗಳು ತೆರೆಯಲು ಅನುಮತಿ ಸಿಗುತ್ತಿದ್ದಂತೆ, ಯಾವ ಚಿತ್ರ ಮೊದಲು ಬಿಡುಗಡೆಯಾಗುತ್ತದೆ ಎಂಬ ಕುತೂಹಲವೂ ಆರಂಭವಾಗಿತ್ತು. ಈಗ ಒಂದಷ್ಟು ಚಿತ್ರಗಳು ಬಿಡುಗಡೆಗೆ ಮುಂದೆ ಬಂದಿವೆ.

Advertisement

ಅವೆಲ್ಲವೂ ರೀರಿಲೀಸ್‌ ಸಿನಿಮಾಗಳಾಗಿವೆ. ಹೌದು, ಚಿತ್ರಮಂದಿರ ಬಿಡುಗಡೆಯಾದರೆ ಮೊದಲ ಆದ್ಯತೆ ರೀರಿಲೀಸ್‌ ಸಿನಿಮಾಗಳಿಗೆ ಎಂದು ಫಿಲಂ ಚೇಂಬರ್‌ ಈ ಹಿಂದೆಯೇ ಹೇಳಿತ್ತು. ಅದರಂತೆ, ಈಗ ಒಂದಷ್ಟು ಚಿತ್ರಗಳು ಮರು ಬಿಡುಗಡೆಯಾಗಲಿವೆ.

ಅದರಲ್ಲಿ ಚಿರಂಜೀವಿ ಸರ್ಜಾ ಅವರ “ಶಿವಾರ್ಜುನ’, ಮದರಂಗಿ ಕೃಷ್ಣ ನಾಯಕರಾಗಿರುವ “ಲವ್‌ ಮಾಕ್ಟೇಲ್‌’ ಹಾಗೂ ಪ್ರಜ್ವಲ್‌ ಅವರ “ಜಂಟಲ್‌ ಮ್ಯಾನ್‌’ ಚಿತ್ರಗಳು ಮೊದಲ ಸಾಲಿನಲ್ಲಿ ಸಿಗುತ್ತವೆ. ಚಿರಂಜೀವಿ ಅವರ “ಶಿವಾರ್ಜುನ’ ಬಿಡುಗಡೆಯಾದ ಬೆನ್ನಿಗೆ ಲಾಕ್‌ಡೌನ್‌ ಆರಂಭವಾಗಿತ್ತು. ಹಾಗಾಗಿ, ನಿರ್ಮಾಪಕರು ಸಂಕಷ್ಟಕ್ಕೆ ಎದುರಾಗಿದ್ದರು. ಈಗ ಚಿತ್ರವನ್ನು ಅಕ್ಟೋಬರ್‌16 ರಂದು ಮರುಬಿಡುಗಡೆ ಮಾಡಲು ಚಿತ್ರ ಮುಂದೆ ಬಂದಿದೆ. ಇದರ ಬೆನ್ನಿಗೆ ಚಿರು ಅವರ “ರಣಂ’ ಚಿತ್ರವೂ ಬಿಡುಗಡೆಯಾಗಲಿದೆ. ಮರುಬಿಡುಗಡೆ ಸಿನಿಮಾಗಳಿಗೆ ಪ್ರೇಕ್ಷಕ ಹೇಗೆ ಪ್ರತಿಕ್ರಿಯಿಸುತ್ತಾನೆ ಎಂಬ ಕುತೂಹಲವಂತೂ ಎಲ್ಲರಲ್ಲೂ ಇದೆ. ­

Advertisement

Udayavani is now on Telegram. Click here to join our channel and stay updated with the latest news.

Next