Advertisement

ಸಂಪಾಜೆ : ಗುಂಡು ಹಾರಿಸಿಕೊಂಡು ವಕೀಲ ಆತ್ಮಹತ್ಯೆ 

03:16 PM Dec 17, 2017 | Team Udayavani |

ಮಡಿಕೇರಿ: ಸಂಪಾಜೆಯಲ್ಲಿ ಉದ್ಯಮಿ, ವಕೀಲರೊಬ್ಬರು ಸ್ವಯಂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಗೆ ಶರಣಾದ ಘಟನೆ ಶನಿವಾರ ರಾತ್ರಿ ನಡೆದಿದೆ.

Advertisement

ಆತ್ಮಹತ್ಯೆಗೆ ಶರಣಾದ ವಕೀಲ  ದೇವಿಚರಣ್‌ (36) ಆಗಿದ್ದು, ಇವರುಚಿತ್ರ ನಿರ್ಮಾಪಕ, ಸಾಹಿತಿ  ಸಂಪಾಜೆಯ ಪಂಚಲಿಂಗೇಶ್ವರ ದೇವಾಲಯದ ಆಡಳಿತಮೊಕ್ತೇಸರ ದೇವಿ ಪ್ರಸಾದ್‌ ಅವರ ಪುತ್ರ.

ಮನೆಯಲ್ಲಿ ಒಬ್ಬರೇ ಇದ್ದಾಗ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಕಾರಣ ಏನೆಂದು ಇನ್ನಷ್ಟೇ ತಿಳಿದು ಬರಬೇಕಿದೆ.

ದೇವಿಚರಣ್‌ ನಿವಾಸ ಸುಳ್ಯದಲ್ಲಿದ್ದು ಪತ್ನಿ ಮತ್ತು ಮಕ್ಕಳಿಬ್ಬರೊಂದಿಗೆ ವಾಸವಾಗಿದ್ದರು. ದೇವಿಪ್ರಸಾದ್‌ ಅವರು ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. 

ಭಾನುವಾರ ಬೆಳಗ್ಗೆ ಮನೆಕೆಲಸದ ವರು ಬಂದಾಗ ಶವ ಪತ್ತೆಯಾಗಿದೆ. 

Advertisement

ಮಡಿಕೇರಿ ಗ್ರಾಮಾಂತರ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next