Advertisement

Gujarat : ಬ್ಯಾಂಕ್‌ ಮ್ಯಾನೇಜರ್‌ ನೇಣಿಗೆ ಶರಣು; ಸೂಸೈಡ್‌ ನೋಟ್‌ ಪತ್ತೆ, ಪೊಲೀಸ್‌ ತನಿಖೆ

12:10 PM Apr 05, 2024 | Team Udayavani |

ಗುಜರಾತ್:‌ ಸೂರತ್‌ ನ ಬಂಧನ್‌ ಬ್ಯಾಂಕ್‌ ನ ಕಪೋದರಾ ಶಾಖೆಯ ಮ್ಯಾನೇಜರ್‌ ತಮ್ಮ ನಿವಾಸದಲ್ಲಿ ನೇಣಿಗೆ ಶರಣಾಗಿರುವ ಘಟನೆ ನಡೆದಿರುವುದಾಗಿ ವರದಿ ತಿಳಿಸಿದೆ. ಮೃತ ಮ್ಯಾನೇಜರ್‌ ಬರೆದಿಟ್ಟ ಸೂಸೈಡ್‌ ನೋಟ್‌ ಸಿಕ್ಕಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ಇದನ್ನೂ ಓದಿ:ಹೆರಿಗೆ ಮಾಡಿಸಲು ನಿರಾಕರಿಸಿದ ವೈದ್ಯರು… ಆಸ್ಪತ್ರೆ ಹೊರಗೆ ಮಗುವಿಗೆ ಜನ್ಮ ನೀಡಿದ ಮಹಿಳೆ

ನೇಣಿಗೆ ಶರಣಾಗಿರುವ ಬ್ಯಾಂಕ್‌ ಮ್ಯಾನೇಜರ್‌ ರಾಕೇಶ್‌ ನವ್‌ ಪ್ರಿಯಾ (32) ಎಂದು ಗುರುತಿಸಲಾಗಿದೆ. ರಾಕೇಶ್‌ ಅವಿವಾಹಿತರಾಗಿದ್ದು, ತಮ್ಮ ಪೋಷಕರು ಮತ್ತು ಹಿರಿಯ ಅಣ್ಣನ ಜತೆ ವಾಸವಾಗಿದ್ದರು.

ರಾಕೇಶ್‌ ಸಹೋದರ ಅವರ ಕೋಣೆಯ ಬಾಗಿಲನ್ನು ಒಡೆದು ನೋಡಿದಾಗ ನೇಣು ಹಾಕಿಕೊಂಡಿರುವುದು ಗಮನಕ್ಕೆ ಬಂದಿರುವುದಾಗಿ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ. “ ತಾನು ಮಾಡಿದ ತಪ್ಪಿನಿಂದಾಗಿ ತಮ್ಮ ಕುಟುಂಬದ ಮೇಲೆ ಪರಿಣಾಮ ಬೀರಿದ್ದು, ಈ ಕಾರಣದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ರಾಕೇಶ್‌ ಸೂಸೈಡ್‌ ನೋಟ್‌ ನಲ್ಲಿ ಬರೆದಿಟ್ಟಿರುವುದಾಗಿ” ಪೊಲೀಸರು ಮಾಹಿತಿ ನೀಡಿರುವುದಾಗಿ ವರದಿ ವಿವರಿಸಿದೆ.

ಘಟನೆಗೆ ಸಂಬಂಧಿಸಿದಂತೆ ನವ್‌ ಪ್ರಿಯಾ ಅವರ ಸಹೋದ್ಯೋಗಿಗಳು, ಗೆಳೆಯರು, ಕುಟುಂಬ ಸದಸ್ಯರ ಜತೆ ಮಾತುಕತೆ ನಡೆಸಿದ್ದೇವೆ, ಆದರೆ ಯಾವುದೇ ಮಾಹಿತಿ ಸಿಕ್ಕಿಲ್ಲ. ನಾವೀಗ ರಾಕೇಶ್‌ ಮೊಬೈಲ್‌ ಫೋನ್‌ ದಾಖಲೆಯನ್ನು ಪರಿಶೀಲಿಸುತ್ತಿದ್ದು, ಇದರಿಂದ ತನಿಖೆಗೆ ಸಹಾಯವಾಗಬಹುದು ಎಂದು ಕಪೋದರಾ ಪೊಲೀಸ್‌ ಇನ್ಸ್‌ ಪೆಕ್ಟರ್‌ ಎಂಬಿ ಅಸುರಾ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next