Advertisement

BJP; ಮಹಿಳೆ ಅಡುಗೆ ಮಾಡಲೂ ಸಿದ್ಧ, ಜನಸೇವೆಗೂ ಬದ್ಧ ಆಂದೋಲನ

05:44 PM Apr 01, 2024 | Team Udayavani |

ದಾವಣಗೆರೆ:‘ಮಹಿಳೆ ಅಡುಗೆ ಮಾಡಲು ಮಾತ್ರ ಲಾಯಕ್ಕು’ ಎಂಬ ಕಾಂಗ್ರೆಸ್‌ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆ ಖಂಡಿಸಿ, ಬಿಜೆಪಿ ಜಿಲ್ಲಾ ಘಟಕದಿಂದ ಏ. 3 ಇಲ್ಲವೇ ಏ.4 ರಿಂದ ಜಿಲ್ಲಾದ್ಯಂತ ”ಮಹಿಳೆ ಅಡುಗೆ ಮಾಡಲೂ ಸಿದ್ಧ. ಜನಸೇವೆಗೂ ಬದ್ಧ” ಆಂದೋಲನ ನಡೆಸಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎನ್. ರಾಜಶೇಖರ್ ಸೋಮವಾರ ಹೇಳಿದ್ದಾರೆ.

Advertisement

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಜಶೇಖರ್, ಬಿಜೆಪಿಯ ಮಹಿಳಾ ಘಟಕ ಆಂದೋಲನದ ನೇತೃತ್ವವಹಿಸಲಿದ್ದು, ಕಾರ್ಯಕರ್ತೆಯರು ನಗರದ ಸಾರ್ವಜನಿಕ ಸ್ಥಳಗಳಲ್ಲಿ ಅಡುಗೆ ಮಾಡಿ, ಮಹಿಳೆಯರು ಕೇವಲ ಅಡುಗೆಗೆ ಮಾತ್ರ ಸೀಮಿತವಲ್ಲ; ದೇಶಸೇವೆ, ಜನಸೇವೆ ಮಾಡಲು ಸಹ ಸಿದ್ಧರಾಗಿದ್ದಾರೆ ಎಂಬ ಸಂದೇಶ ಸಾರಲಿದ್ದಾರೆ’ ಎಂದರು.

‘ವೈದ್ಯರು, ವಕೀಲರು, ಪೌರಕಾರ್ಮಿಕರು ಸೇರಿದಂತೆ ವಿವಿಧ ವೃತ್ತಿ ಮಾಡುತ್ತಿರುವ ಮಹಿಳೆಯರು ಆಂದೋಲನದಲ್ಲಿ ಪಾಲ್ಗೊಂಡು ಮಹಿಳೆಯರು ಅಡುಗೆ ಮನೆಗೆ ಸೀಮಿತವಲ್ಲ ಎಂಬುದನ್ನು ತಾವು ಸಾಧಿಸಿರುವುದಾಗಿ ಸಂದೇಶ ನೀಡುವರು. ಪ್ರಥಮವಾಗಿ ಜಿಲ್ಲಾ ವ್ಯಾಪ್ತಿಯಲ್ಲಿ ಆಂದೋಲನ ಹಮ್ಮಿಕೊಳ್ಳಲಾಗುತ್ತಿದ್ದು ಮುಂದೆ ಇದು ರಾಜ್ಯಾದ್ಯಂತ ವಿಸ್ತರಿಸಿದರೂ ಅಚ್ಚರಿಯಿಲ್ಲ’ಎಂದರು.

‘ಸ್ವತಃ ಮಹಿಳೆಯಾಗಿರುವ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ತಮ್ಮ ಮಾವ, ಶಾಸಕ ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಯನ್ನು ಸಮರ್ಥಿಸಿಕೊಳ್ಳಬೇಕು. ಇಲ್ಲವೇ ಹೇಳಿಕೆ ನೀಡಿದ್ದು ತಪ್ಪು ಎಂದಾದರೂ ಹೇಳಬೇಕು. ಇವೆರಡನ್ನೂ ಬಿಟ್ಟು ಜನರನ್ನು ದಿಕ್ಕು ತಪ್ಪಿಸುವ ಹೇಳಿಕೆ ನೀಡುವ ಮೂಲಕ ಪಲಾಯನ ಮಾಡುವುದು ಸರಿಯಲ್ಲ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next