Advertisement
ಹೆಮ್ಮಾಡಿ ಹಾಗೂ ಕಟ್ಬೆಲ್ತೂರು ಗ್ರಾ.ಪಂ. ವ್ಯಾಪ್ತಿಯ ಜಾಲಾಡಿ, ಹೊಸ್ಕಳಿ ಭಾಗದ ನೂರಾರು ಎಕರೆ ಗದ್ದೆ ಪ್ರದೇಶಕ್ಕೆ ಪರಿಸರದ ನೂರಾರು ಎಕರೆ ಗದ್ದೆ ಪ್ರದೇಶಗಳಿಗೆ ಕಳೆದ 3-4 ವರ್ಷಗಳಿಂದ ಉಪ್ಪು ನೀರು ನುಗ್ಗಿ, ಕೃಷಿ ಕಾರ್ಯಕ್ಕೆ ತೊಂದರೆಯಾಗುತ್ತಿದೆ. ಇದರಿಂದ ಬಹುತೇಕ ಮಂದಿ ಹಿಂಗಾರು ಹಂಗಾಮಿನಲ್ಲಿ ಗದ್ದೆ ಯನ್ನು ಹಡಿಲು ಬಿಡುವಂತಾಗಿತ್ತು. ಬೇಸಗೆಯಲ್ಲಿ ಇಲ್ಲಿನ ಬಹುತೇಕ ಬಾವಿ ನೀರು ಉಪ್ಪಾಗಿತ್ತು. ರಾಜಾಡಿಯಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣವಾದ ಬಳಿಕ ಈ ಭಾಗದಲ್ಲಿ ಈ ಸಮಸ್ಯೆ ಉದ್ಭವವಾಗಿತ್ತು.
Related Articles
Advertisement
ಈ ಹಿನ್ನೆಲೆಯಲ್ಲಿ ಕಳೆದ ಕೆಲವು ವರ್ಷಗಳಿಂದ ಇಲ್ಲಿಗೆ ಕಿಂಡಿ ಅಣೆಕಟ್ಟು ಹಾಗೂ ನದಿದಂಡೆ ನಿರ್ಮಾಣ ಮಾಡಿಕೊಡಬೇಕು ಎನ್ನುವ ಬೇಡಿಕೆಯನ್ನು ಈ ಭಾಗದ ಜನರು ಶಾಸಕರಿಗೆ ಸಲ್ಲಿಸಿದ್ದರು. ಇದಕ್ಕೆ ಸ್ಪಂದಿಸಿದ ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿಯವರು, ಸಣ್ಣ ನೀರಾವರಿ ಇಲಾಖೆಯಡಿ ನದಿದಂಡೆ ನಿರ್ಮಾಣ ಕಾಮಗಾರಿಗೆ 1 ಕೋ.ರೂ. ಅನುದಾನವನ್ನು ಮಂಜೂರು ಮಾಡಿಸಿದ್ದು, ಈ ಭಾಗದ ರೈತರು ಶಾಸಕರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.