Advertisement

Salman Khurshid: ಬಾಂಗ್ಲಾದಲ್ಲಾಗಿದ್ದು ಭಾರತದಲ್ಲೂ ಆಗಬಹುದು… ಸಲ್ಮಾನ್‌ ಖುರ್ಷಿದ್‌

08:20 AM Aug 08, 2024 | Team Udayavani |

ನವದೆಹಲಿ: ಬಾಂಗ್ಲಾದೇಶದಲ್ಲಾಗಿದ್ದು ಭಾರತದಲ್ಲೂ ಆಗಬಹುದು, ಮೇಲ್ನೋಟಕ್ಕೆ ಎಲ್ಲವೂ ಸಹಜವಾ ಗಿಯೂ ಇದ್ದರೂ, ಒಳಗೆ ಬೇರೆಯೇ ಇದೆ ಎಂದು ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್‌ ನಾಯಕ ಸಲ್ಮಾನ್‌ ಖುರ್ಷಿದ್‌ ಹೇಳಿದ್ದು ವಿವಾದಕ್ಕೆ ಕಾರಣವಾಗಿದೆ. ಅವರ ಹೇಳಿಕೆಗೆ ಬಿಜೆಪಿಯ ಆಕ್ರೋಶಕ್ಕೆ ವ್ಯಕ್ತಪಡಿಸಿದೆ.

Advertisement

ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಕಾಶ್ಮೀರದಲ್ಲಿ ಎಲ್ಲವೂ ಸಹಜವಾಗಿ ಕಾಣುತ್ತಿರಬಹುದು, ಇಲ್ಲೂ ಕೂಡ ಎಲ್ಲವೂ ಸಹಜವಾಗಿರಬಹುದು, ನಾವು ಜಯವನ್ನು ಸಂಭ್ರಮಿಸುತ್ತಿರಬಹುದು, 2024ರ ವಿಜಯ ಸಣ್ಣ ಅಂತರದ್ದಾಗಿದೆ. ಇನ್ನೂ ಮಾಡಲು ಬೇಕಾದಷ್ಟಿದೆ. ಸತ್ಯ ಒಳಪದರಲ್ಲಿದೆ. ಬಾಂಗ್ಲಾದೇಶದಲ್ಲೇನಾಗಿದೆಯೋ ಇಲ್ಲೂ ಆಗಬಹುದು’ ಎಂದು ಖುರ್ಷಿದ್‌ ಹೇಳಿದ್ದಾರೆ.

ಅವರ ಹೇಳಿಕೆ ಬಗ್ಗೆ ಬಿಜೆಪಿ ನಾಯಕರಾದ ಶೆಹಜಾದ್‌ ಪೂನವಾಲ, ಅನುರಾಗ್‌ ಠಾಕೂರ್‌ ಸಿಡಿದೆದ್ದಿದ್ದಾರೆ. “ಮೋದಿಯನ್ನು ದ್ವೇಷಿಸಲು ಹೋಗಿ ಅವರು ಭಾರತವನ್ನೇ ದ್ವೇಷಿಸುತ್ತಿದ್ದಾರೆ. ಸಲ್ಮಾನ್‌ ಖುರ್ಷಿದ್‌/ಕಾಂಗ್ರೆಸ್‌ ಬಾಂಗ್ಲಾ ದೇಶದಲ್ಲಾದ ಹಿಂಸಾಚಾರ ಭಾರತದಲ್ಲೂ ಆಗಲಿ ಎಂದು ಪ್ರಚೋದನೆ ನೀಡುತ್ತಿದ್ದಾರಾ? ಪ್ರಾರ್ಥನೆ ಮಾಡುತ್ತಿದ್ದಾರಾ? ಎಂದು ಪೂನಾವಾಲಾ ಪ್ರಶ್ನಿಸಿದ್ದರೆ, ಸಂಸದ ಅನುರಾಗ್‌ ಠಾಕೂರ್‌ ಖುರ್ಷೀದ್‌ ಒಬ್ಬ ಅರಾಜಕತಾವಾದಿ ಎಂದು ಟೀಕಿಸಿದ್ದಾರೆ.

ಇದನ್ನೂ ಓದಿ: Paris ನಿಮ್ಮನ್ನೇ ನಂಬಿದ್ದೇವೆ ನೀರಜ್‌! ಟೋಕಿಯೊ ಗೋಲ್ಡನ್‌ ಹೀರೋ ನೀರಜ್‌ ಮೇಲೆ ಭಾರೀ ಭರವಸೆ

Advertisement

Udayavani is now on Telegram. Click here to join our channel and stay updated with the latest news.

Next