Advertisement

ಹಿಂಸೆಗೆ ಪ್ರೇರಣೆ ಕೊಟ್ಟದ್ದೇ ಸಜ್ಜನ್‌ ಕುಮಾರ್‌

07:31 AM Nov 17, 2018 | Team Udayavani |

ಹೊಸದಿಲ್ಲಿ: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆಯ ಬಳಿಕ ನಡೆದ ಸಿಕ್ಖ್ ವಿರೋಧಿ ದಂಗೆಗಳಿಗೆ ಕಾಂಗ್ರೆಸ್‌ನ ನಾಯಕ ಸಜ್ಜನ್‌ ಕುಮಾರ್‌ ಪ್ರಚೋದನೆ ನೀಡಿದ್ದರು ಎಂದು ಪ್ರತ್ಯಕ್ಷದರ್ಶಿದಿಲ್ಲಿಯ ಕೋರ್ಟೊಂದಕ್ಕೆ ಹೇಳಿದ್ದಾರೆ. ಚೇಮ್‌ ಕೌರ್‌ ಎಂಬುವರು ಶುಕ್ರವಾರ ನಡೆದ ವಿಚಾರಣೆ ವೇಳೆ ಕಾಂಗ್ರೆಸ್‌ ನಾಯಕನನ್ನು ಗುರುತಿಸಿ ಈ ಮಾತುಗಳನ್ನು ಹೇಳಿದ್ದಾರೆ. 1984ರ ಅ.31ರಂದು  ಇಂದಿರಾ ಗಾಂಧಿ ಯವರು ನಿಧನರಾದ ಸುದ್ದಿಚಯನ್ನು ಟಿ.ವಿ.ಯಲ್ಲಿ ನೋಡು ತ್ತಿದ್ದೆವು. ನ.1, 1984ರಂದು ನನ್ನ ಮನೆಯ ಆಡು ಹುಡುಕಿ ಕೊಂಡು ಬರಲೆಂದು ಹೊರಗಡೆ ತೆರಳಿದಾಗ ಸಜ್ಜನ್‌ ಕುಮಾರ್‌ ಅವರು “ನಮ್ಮ ತಾಯಿಯವರನ್ನು ಕೊಂದ ಸಿಖVರನ್ನು ಕೊಲ್ಲಿರಿ’ ಎಂದು ಹೇಳುತ್ತಿದ್ದರು ಎಂದು  ಹೇಳಿಕೆ ನೀಡಿದ್ದಾರೆ. ಮಾರನೇ ದಿನ ಅಂದರೆ ನ.2ರಂದು ತಂದೆ ಮತ್ತು ಮಗನ ಮೇಲೆ ದಾಳಿ ಮಾಡಿ ಅವರನ್ನು ಕೊಲ್ಲಲಾಗಿದೆ ಎಂದೂ ಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next