Advertisement

Woman; ಶಾಮನೂರು ಹೇಳಿಕೆ ವಿರುದ್ಧ ಕಿಡಿ ಕಾರಿದ ಸೈನಾ ನೆಹ್ವಾಲ್

05:50 PM Mar 30, 2024 | Team Udayavani |

ಬೆಂಗಳೂರು: ದಾವಣಗೆರೆಯ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಅವರನ್ನು ಟೀಕಿಸುವ ಭರದಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರು ನೀಡಿದ ”ಮಾತನಾಡಲು ಬಾರದ ಬಿಜೆಪಿ ಅಭ್ಯರ್ಥಿ ಅಡುಗೆ ಮಾಡಲು ಲಾಯಕ್ಕು” ಹೇಳಿಕೆ ವಿರುದ್ಧ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಆಕ್ರೋಶ ಹೊರ ಹಾಕಿದ್ದಾರೆ.

Advertisement

ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಸೈನಾ ”ಮಹಿಳೆಯನ್ನು ಅಡುಗೆ ಕೋಣೆಗೆ ಸೀಮಿತಗೊಳಿಸಬೇಕು’- ಇದು ಕರ್ನಾಟಕದ ಅಗ್ರಮಾನ್ಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ಮಾತು. ದಾವಣಗೆರೆಯ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಜೀ ಅವರ ಮೇಲಿನ ಹೇಳಿಕೆ ಲಡಕಿ ಹೂಂ ಲಡ್ ಸಕ್ತಿ ಹೂಂ ಎಂದು ಹೇಳುವ ಪಕ್ಷದಿಂದ ಕನಿಷ್ಠ ನಿರೀಕ್ಷೆಯಿತ್ತು. ನಾನು ಕ್ರೀಡಾಂಗಣದಲ್ಲಿ ದೇಶಕ್ಕಾಗಿ ಪದಕಗಳನ್ನು ಗೆದ್ದಾಗ ನಾನು ಏನು ಮಾಡಬೇಕೆಂದು ಕಾಂಗ್ರೆಸ್ ಪಕ್ಷ ಆದ್ಯತೆ ನೀಡುತ್ತಿತ್ತು? ಎಲ್ಲಾ ಹುಡುಗಿಯರು ಮತ್ತು ಮಹಿಳೆಯರು ತಮಗೆ ಇಷ್ಟವಾದ ಯಾವುದೇ ಕ್ಷೇತ್ರದಲ್ಲಿ ದೊಡ್ಡದನ್ನು ಸಾಧಿಸಬೇಕು ಎಂದು ಕನಸು ಕಾಣುತ್ತಿರುವಾಗ ಹೀಗೆ ಏಕೆ ಹೇಳಬೇಕು ….ಒಂದೆಡೆ ನಾವು ನಾರಿ ಶಕ್ತಿ ಕೋ ವಂದನ್ ಮಾಡುತ್ತಿದ್ದೇವೆ. ನಮ್ಮ ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಲಾಗಿದೆ ಮತ್ತು ಇನ್ನೊಂದೆಡೆ ನಾರಿ ಶಕ್ತಿ ಕಾ ಅಪಮಾನ ಮತ್ತು ಸ್ತ್ರೀದ್ವೇಷದ ಜನರಿದ್ದಾರೆ.. ನಿಜವಾಗಿಯೂ ಖಂಡನೀಯ” ಎಂದು ಅಸಮಾಧಾನ ಹೊರ ಹಾಕಿದ್ದಾರೆ.

ಹಿರಿಯ ನಾಯಕ ಶಾಮನೂರು ಅವರ ಟೀಕೆಯಿಂದ ಕುಪಿತಗೊಂಡ ಬಿಜೆಪಿ ಅಭ್ಯರ್ಥಿ ಗಾಯತ್ರಿಯವರು, ನಾವು ಈಗಾಗಲೇ ಗೆದ್ದಿದ್ದೇವೆ. ಚುನಾವಣೆ ಫಲಿತಾಂಶದ ದಿನ ನಾವು ಗೆದ್ದು ಮಹಿಳೆಯರು ಬರೀ ಅಡುಗೆ ಮಾಡುವುದಕ್ಕೆ ಮಾತ್ರವಲ್ಲ, ಅಧಿಕಾರವೂ ಚಲಾಯಿಸುತ್ತೇವೆ ಎಂದು
ತೋರಿಸುತ್ತೇವೆ ಎಂದು ತಿರುಗೇಟು ನೀಡಿದ್ದಾರೆ.

ನೆಹ್ವಾಲ್ 2020ರಲ್ಲಿ ಸಹೋದರಿ ಅಬು ಚಂದ್ರಾಂಶು ನೆಹ್ವಾಲ್ ಅವರೊಂದಿಗೆ ಬಿಜೆಪಿ ಸೇರಿದ್ದರು. ನರೇಂದ್ರ ಮೋದಿ ಅವರು ದೇಶಕ್ಕಾಗಿ ಶ್ರಮಿಸುತ್ತಿದ್ದಾರೆ ಮತ್ತು ನನಗೆ ಯಾವಾಗಲೂ ಸ್ಫೂರ್ತಿ ನೀಡುತ್ತಿದ್ದಾರೆ” ಎಂದು ಹೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next