Advertisement

ರಾ. ಬ್ಯಾಡ್ಮಿಂಟನ್‌ ಕ್ವಾ.ಫೈನಲ್‌ಗೆ ಸಿಂಧು,ಸೈನಾಗೆ ನೇರ ಅರ್ಹತೆ

06:50 AM Oct 02, 2017 | Team Udayavani |

ಹೊಸದಿಲ್ಲಿ: ಮುಂಬರುವ ರಾಷ್ಟ್ರೀಯ ಬ್ಯಾಡ್ಮಿಂಟನ್‌ ಕೂಟಕ್ಕೆ ದೇಶದ ಖ್ಯಾತ ಆಟಗಾರರಾದ ಪಿ.ವಿ.ಸಿಂಧು, ಸೈನಾ ನೆಹ್ವಾಲ್‌ ನೇರವಾಗಿ ಕ್ವಾರ್ಟರ್‌ ಫೈನಲ್‌ನಲ್ಲಿ ಆಡುವ ಅರ್ಹತೆ ಪಡೆದಿದ್ದಾರೆ.

Advertisement

ಇದು ದೇಶದ ಅಗ್ರ 50 ಶ್ರೇಯಾಂಕಿತ ಆಟಗಾರರ ವಿಭಾಗದ ನಡುವಿನ ಪಂದ್ಯಾವಳಿಯಾಗಿದ್ದು, ಒಂದು ಕೋಟಿ ರೂ. ನಗದು ಬಹುಮಾನವನ್ನು ಒಳಗೊಂಡಿದೆ.

ಒಲಿಂಪಿಕ್ಸ್‌ ಬೆಳ್ಳಿ ಪದಕ ವಿಜೇತೆ ಸಿಂಧು, ಇತ್ತೀಚೆಗೆ ವಿಶ್ವ ಬ್ಯಾಡ್ಮಿಂಟನ್‌ ಕೂಟದಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಇದೇ ಕೂಟದಲ್ಲಿ ಸೈನಾ ನೆಹ್ವಾಲ್‌ ಕಂಚಿನ ಪದಕ ಜಯಿದ್ದರು.ಪುರುಷರ ವಿಭಾಗದಲ್ಲಿ ಕೆ. ಶ್ರೀಕಾಂತ್‌, ಎಚ್‌.ಎಸ್‌. ಪ್ರಣಯ್‌, ಬಿ. ಸಾಯಿ ಪ್ರಣೀತ್‌, ಸಮೀರ್‌ ವರ್ಮ, ಅಜಯ್‌ ಜಯರಾಮ್‌ ನೇರ ಅರ್ಹತೆ ಪಡೆದುಕೊಂಡ ಆಟಗಾರರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next