Advertisement

331 ವಲಸೆ ಕಾರ್ಮಿಕರ ಗಂಟಲು ದ್ರವ ಸಂಗ್ರಹ

12:47 PM May 28, 2020 | Naveen |

ಸೈದಾಪುರ: ಪಟ್ಟಣದ ಮೂರು ಕ್ವಾರಂಟೈನ್‌ ಕೇಂದ್ರದಲ್ಲಿರುವ 331 ವಲಸೆ ಕಾರ್ಮಿಕರ ಮೂಗು ಮತ್ತು ಗಂಟಲು ದ್ರವದ ಮಾದರಿಯಲ್ಲಿ ಸಂಗ್ರಹಿಸಲಾಗಿದೆ. ಪಟ್ಟಣದ ಸ್ವಾಮಿ ವಿವೇಕಾನಂದ ವಸತಿ ಶಾಲೆಯಲ್ಲಿ 39, ಮೆಟ್ರಿಕ್‌ ಪೂರ್ವ ಬಾಲಕರ ವಸತಿ ನಿಲಯದಲ್ಲಿ 37 ಮತ್ತು ಕಿತ್ತೂರು ರಾಣಿ ಚನ್ನಮ್ಮ ವಸತಿ ನಿಲಯದಲ್ಲಿ 255 ಕಾರ್ಮಿಕರ ಮಾದರಿ ಸಂಗ್ರಹಿಸಲಾಯಿತು.

Advertisement

ಯಾದಗಿರಿಯಿಂದ ಆಗಮಿಸಿದ ಮೊಬೈಲ್‌ ಸ್ವಾಬ್‌ ತಂಡ ಕ್ವಾರಂಟೈನ್‌ ನಲ್ಲಿರುವವರ ಮೂಗು ಮತ್ತು ಗಂಟಲು ದ್ರವ ಸಂಗ್ರಹಿಸಿ ಕೋವಿಡ್ ವೈರಸ್‌ ಪರೀಕ್ಷೆಗಾಗಿ ಪ್ರಯೋಗಲಾಯಕ್ಕೆ ಕಳಿಹಿಸಿಕೊಟ್ಟಿದೆ. ಫಲಿತಾಂಶದ ವರದಿ ಅಧಿಕಾರಿಗಳ ಕೈ ಸೇರಲು ಇನ್ನು 3 ದಿನ ಬೇಕಾಗುತ್ತದೆ. ಆದರೆ ಫಲಿತಾಂಶದ ವರದಿಯೂ ಹೇಗೆ ಬರುತ್ತದೆ ಎಂಬ ಭಯ ಕ್ವಾರಂಟೈನ್‌ನಲ್ಲಿರುವ ಪ್ರತಿಯೊಬ್ಬ ವಲಸಿಗರನ್ನು ಕಾಡುತ್ತಿದೆ. ಇಲ್ಲಿಯವರೆಗೂ ಮೂರು ಕೇಂದ್ರಗಳಲ್ಲಿ ಒಂದು ಕೇಸ್‌ ಕೂಡ ಪಾಸಿಟಿವ್‌ ಬಂದಿಲ್ಲ. ಆದರೆ ಮುಂದಿನ ದಿನಗಳಲ್ಲಿ ಫಲಿತಾಂಶ ಪಾಸಿಟಿವ್‌ ಬಂದರೆ ಇಲ್ಲಿನ ಸ್ಥಿತಿ ಗತಿ ಹೇಗಿರುತ್ತದೆ ಎಂಬ ಆತಂಕದಲ್ಲಿ ಕಾಲ ಕಳೆಯುವಂತಾಗಿದೆ.  ಕೇಂದ್ರಗಳಲ್ಲಿ ಜಿಲ್ಲಾಡಳಿತದ ಆದೇಶ ಗಾಳಿಗೆ ತೂರಿ ಸುರಕ್ಷಿತ ಅಂತರ ಮರೆತು ಸಾಮಾನ್ಯವಾಗಿ ಎಲ್ಲರೂ ಸಾಮೂಹಿಕವಾಗಿ ಇರುವುದರಿಂದ ತೆಲೆನೋವಾಗಿ ಪರಿಣಮಿಸಿದೆ.

ಡಾ| ರಾಮಣ್ಣಗೌಡ, ಡಾ| ಪ್ರಮೋದ, ಕಿರಿಯ ಆರೋಗ್ಯ ಸಹಾಯಕರಾದ ರಾಜೇಂದ್ರ, ಹಣಮಂತ, ತಾಯಪ್ಪ, ಚಂದ್ರನೀಲ ಬೆಳಗುಂದಿ, ಕವಿತಾ ವಿಭೂತಿ ಸೈದಾಪುರ, ಲ್ಯಾಬ್‌ ಟೆಕ್ನಿಷಿಯನ್ಸ್‌ ಸುಭಾಷ, ಮಂಜುನಾಥ, ರಿಚರ್ಡಸನ್‌, ಭಾಗಪ್ಪ, ವೆಂಕಟೇಶ, ನಾಗೇಂದ್ರಪ್ಪ ಮಾಧ್ವಾರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next