Advertisement

Mantralayam; ರಾಯರ ಹುಂಡಿಯಲ್ಲಿ 31 ದಿನಗಳಲ್ಲಿ 3.38 ಕೋ.ರೂ. ಸಂಗ್ರಹ

01:37 AM Oct 27, 2024 | Team Udayavani |

ರಾಯಚೂರು: ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠದ ಹುಂಡಿಗೆ ಕಳೆದ 31 ದಿನಗಳಲ್ಲಿ ಭಕ್ತರು ಹಾಕಿರುವ ಕಾಣಿಕೆ ಹಾಗೂ ಚಿನ್ನ, ಬೆಳ್ಳಿ ಎಣಿಕೆ ಕಾರ್ಯ ನಡೆಸಲಾಗಿದ್ದು 3.38 ಕೋಟಿ ರೂ. ಹಣ ಸಂಗ್ರಹವಾಗಿದೆ.

Advertisement

3,30,57,440 ರೂ. ಮೌಲ್ಯದ ನೋಟುಗಳು, 7,44,960 ರೂ. ಮೌಲ್ಯದ ನಾಣ್ಯಗಳು ಸೇರಿ ಒಟ್ಟು 3,38,02,400 ರೂ. ಸಂಗ್ರಹವಾಗಿದೆ. ಜತೆಗೆ 136 ಗ್ರಾಂ ಚಿನ್ನ, 1,180 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ ಎಂದು ಶ್ರೀಮಠದ ವ್ಯವಸ್ಥಾಪಕ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next