Advertisement

ಸಹಸ್ರ ಚಂಡಿಕಾ ಯಾಗ ಸಂಪನ್ನ

11:04 PM Jan 21, 2020 | Team Udayavani |

ಶೃಂಗೇರಿ: ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದಲ್ಲಿ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಕುಟುಂಬ ಕೈಗೊಂಡಿದ್ದ ಸಹಸ್ರ ಚಂಡಿಕಾ ಯಾಗ, ಪೂರ್ಣಾಹುತಿ ಯೊಂದಿಗೆ ಮಂಗಳವಾರ ಸಂಪನ್ನಗೊಂಡಿತು.

Advertisement

ಶ್ರೀ ಮಠದ ಎದುರಿನ ಶ್ರೀ ಚಂದ್ರಶೇಖರ ಭಾರತೀ ಸಭಾಂಗಣದಲ್ಲಿ ಜ.17ರಂದು ಎಚ್‌.ಡಿ.ದೇವೇಗೌಡ ಮತ್ತು ಚನ್ನಮ್ಮ ಚಂಡಿಕಾ ಯಾಗದ ಸಂಕಲ್ಪ ಕೈಗೊಂಡಿದ್ದರು. ಕುಡ್ನಲ್ಲಿ ಲಕ್ಷ್ಮೀ ನಾರಾಯಣ ಸೋಮಯಾಜಿ ನೇತೃತ್ವದ 100 ಋತ್ವಿಜರ ತಂಡ ಯಾಗ ನೆರವೇರಿಸಿತು. ಕಳೆದ 5 ದಿನಗಳಿಂದಲೂ ದೇವೇಗೌಡ ದಂಪತಿ ಶ್ರೀಮಠದ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡಿದ್ದರು. ಮೊದಲ ದಿನ ಗಣಪತಿ ಹೋಮ ನಡೆಸಿದ ನಂತರ ಚಂಡಿಕಾಯಾಗ ಆರಂಭಿಸಲಾಗಿತ್ತು. ಯಾಗದ ಪ್ರಯುಕ್ತ ಪ್ರತಿ ದಿನವೂ ಪಾರಾಯಣ, ಜಪ ನಡೆಸಲಾಯಿತು.

ಮಂಗಳವಾರ ಪೂರ್ಣಾಹುತಿಯಲ್ಲಿ ಶ್ರೀ ಶಾರದಾ ಪೀಠದ ಕಿರಿಯ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳು ಉಪಸ್ಥಿತರಿದ್ದರು. ದೇವೇಗೌಡ ಮತ್ತು ಚನ್ನಮ್ಮ ಅವರೊಂದಿಗೆ ಕುಟುಂಬದ ಎಚ್‌.ಡಿ.ರೇವಣ್ಣ, ಎಚ್‌.ಡಿ.ಕುಮಾರಸ್ವಾಮಿ, ಎಚ್‌.ಡಿ.ರಮೇಶ್‌, ಎಚ್‌.ಡಿ.ಬಾಲಕೃಷ್ಣ, ಶೈಲಾ, ಅನುಸೂಯಾ, ಸೊಸೆ ಅನಿತಾ ಕುಮಾರಸ್ವಾಮಿ, ಮೊಮ್ಮಕ್ಕಳು ಭಾಗವಹಿಸಿದ್ದರು.ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌. ಭೋಜೇಗೌಡ, ಶಾಸಕ ಟಿ.ಡಿ.ರಾಜೇಗೌಡ, ಜೆಡಿಎಸ್‌ ಮುಖಂಡರಾದ ಎಚ್‌.ಜಿ.ವೆಂಕಟೇಶ್‌, ದಿವಾಕರ ಭಟ್‌, ಜಿ.ಜಿ.ಮಂಜುನಾಥ್‌, ಭರತ್‌ಗೌಡ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next