Advertisement

ಸಾಗರ: ಮನೆಯಲ್ಲಿ 3.30 ಲಕ್ಷ ರೂ. ಮೌಲ್ಯದ ಬಂಗಾರದ ಆಭರಣ ಕಳ್ಳತನ

09:24 PM Jul 15, 2022 | Vishnudas Patil |

ಸಾಗರ: ಇಲ್ಲಿನ ಶ್ರೀಧರ ನಗರದ ದೇವರಾಜ್ ಎಂಬುವವರ ಮನೆಯಲ್ಲಿ ಗುರುವಾರ ರಾತ್ರಿ ಕಳ್ಳತನವಾಗಿದ್ದು, ಸುಮಾರು 3.30 ಲಕ್ಷ ರೂ. ಮೌಲ್ಯದ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಲಾಗಿದೆ.

Advertisement

ದೇವರಾಜ್ ಅವರು ತಮ್ಮ ಮಗನನ್ನು ಕಾಲೇಜಿಗೆ ಪ್ರವೇಶಾತಿ ಮಾಡುವ ಸಲುವಾಗಿ ಪತ್ನಿಯ ಜತೆ ಮಂಗಳೂರಿಗೆ ಗುರುವಾರ ತೆರಳಿದ್ದರು. ರಾತ್ರಿ ಸುಮಾರು 2 ಗಂಟೆ ಸಮಯದಲ್ಲಿ ಮನೆಗೆ ಮರಳಿದಾಗ, ಮನೆಯ ಮುಂಬಾಗಿಲ ಬೀಗ ಒಡೆದಿರುವುದು ಗಮನಕ್ಕೆ ಬಂದಿದೆ.

ದೇವರಕೋಣೆಯಲ್ಲಿನ ಗಾಡ್ರೇಜ್ ಒಡೆಯಲಾಗಿದ್ದು, ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದವು. ದೇವರಾಜ್ ಈ ಸಂಬಂಧ ನಗರ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದೇವಸ್ಥಾನದಲ್ಲಿನ ಕಾಣಿಕೆ ಹುಂಡಿಗೆ ಕನ್ನ

ಭಿಮನಕೋಣೆ ರಸ್ತೆಯಲ್ಲಿನ ಪ್ರಸಾದ ಗಣಪತಿ ದೇವಸ್ಥಾನದಲ್ಲಿ ಗುರುವಾರ ರಾತ್ರಿ ಕಳ್ಳತನ ಮಾಡಲಾಗಿದ್ದು, ಈ ಸಂಬಂಧ ಸಮಿತಿಯ ಅಧ್ಯಕ್ಷ ಮಂಜುನಾಥ ಪೇಟೆ ಠಾಣೆಯಲ್ಲಿ ಶುಕ್ರವಾರ ದೂರು ದಾಖಲಿಸಿದ್ದಾರೆ.

Advertisement

ಪ್ರಸಾದ ಗಣಪತಿ ದೇವಸ್ಥಾನದಲ್ಲಿನ ಕಾಣಿಕೆ ಹುಂಡಿಯನ್ನು ಒಡೆಯಲಾಗಿದ್ದು, ಅದರಲ್ಲಿ ಹಣ ಸಿಗದ ಕಾರಣ ದೇವಸ್ಥಾನದಲ್ಲಿದ್ದ ಅಂದಾಜು 7 ಸಾವಿರ ರೂ ಮೌಲ್ಯದ ಆಂಪ್ಲಿಫೈಯರ್ ಕಳ್ಳತನ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next