Advertisement

ಸಿಸಿ ಕ್ಯಾಮರಾ ಅಳವಡಿಸಲು ಒತ್ತಾಯ

03:21 PM Nov 11, 2021 | Adarsha |

ಸಾಗರ: ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಸಿಸಿಕ್ಯಾಮರಾ ಅಳವಡಿಸುವಂತೆ ಒತ್ತಾಯಿಸಿ ಬುಧವಾರಮಲೆನಾಡು ಸಣ್ಣ ಕೈಗಾರಿಕೆ ಮಾಲೀಕರು ಮತ್ತುಕಾರ್ಮಿಕರ ಸಂಘದ ವತಿಯಿಂದ ನಗರಸಭೆ ಅಧ್ಯಕ್ಷರಿಗೆಮತ್ತು ನಗರಠಾಣೆಗೆ ಮನವಿ ಸಲ್ಲಿಸಲಾಯಿತು.

Advertisement

ಇತ್ತೀಚಿನ ಕೆಲವು ತಿಂಗಳುಗಳಿಂದ ಕೈಗಾರಿಕಾವಸಾಹತು ಪ್ರದೇಶ ಮತ್ತು ಮಂಗಳಬೀಸು ಆಟೋಕಾಂಪ್ಲೆಕ್ಸ್‌ನಲ್ಲಿ ಕಳ್ಳತನಗಳು ಹೆಚ್ಚುತ್ತಿದೆ. ವಾಹನಮಾಲೀಕರು ನಮ್ಮ ಮೇಲೆ ವಿಶ್ವಾಸ ಇರಿಸಿ ವಾಹನಗಳನ್ನುರಿಪೇರಿಗೆ ಬಿಟ್ಟು ಹೋಗಿರುತ್ತಾರೆ. ರಾತ್ರೋರಾತ್ರಿ ಕಳ್ಳರುವಾಹನಗಳ ಬಿಡಿಭಾಗಗಳನ್ನು ಕದ್ದೊಯ್ಯುತ್ತಿದ್ದಾರೆ.ಇದರಿಂದಾಗಿ ನಾವು ಆಟೋ ಗ್ಯಾರೇಜ್‌ ನಡೆಸಲುಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ ಎಂದುಮನವಿಯಲ್ಲಿ ತಿಳಿಸಲಾಗಿದೆ.

ಎರಡೂ ಸಂಕೀರ್ಣದಲ್ಲಿ ಸಣ್ಣ ಮತ್ತು ದೊಡ್ಡಆಟೋ ಗ್ಯಾರೇಜ್‌ಗಳಿದ್ದು ಪದೇಪದೇ ಕಳ್ಳತನನಡೆಯುತ್ತಿರುವುದರಿಂದ ನಗರಸಭೆ ಅನುದಾನದಲ್ಲಿಎಲ್ಲ ಭಾಗಕ್ಕೂ ಸಿಸಿ ಕ್ಯಾಮರಾ ಅಳವಡಿಸಬೇಕು.ಕಳ್ಳರ ಚಲನವಲನ ಪತ್ತೆಹಚ್ಚಲು ಪೊಲೀಸರು ಬೀಟ್‌ವ್ಯವಸ್ಥೆಯನ್ನು ಹೆಚ್ಚಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ರಜನೀಕಾಂತ್‌,ಪ್ರಧಾನ ಕಾರ್ಯದರ್ಶಿ ರವಿ ಆರ್‌.ಕೆ., ಉಪಾಧ್ಯಕ್ಷಕಾರ್ಣಿಕ್‌ರಾಜ್‌, ಸಂಚಾಲಕರಾದ ವೆಂಕಟೇಶ್‌,ನಾಗರಾಜ್‌ ಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next