Advertisement

ಸಾಗರ: ಕೊನೆ ಕ್ಷಣದಲ್ಲಿ ಜೆಡಿಎಸ್ ಅಭ್ಯರ್ಥಿಯಿಂದ ನಿವೃತ್ತಿ ಘೋಷಣೆ !

10:32 PM May 08, 2023 | Team Udayavani |

ಸಾಗರ: ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿದ್ದ ನಗರಸಭೆ ಸದಸ್ಯ ಸೈಯ್ಯದ್ ಜಾಕೀರ್ ಚುನಾವಣಾ ಕಣದಿಂದ ಹಿಂದಕ್ಕೆ ಸರಿದಿರುವುದಾಗಿ ಸೋಮವಾರ ಹೇಳಿಕೆ ನೀಡಿದ್ದಾರೆ. ಕಳೆದ ಮೂರ‍್ನಾಲ್ಕು ದಿನಗಳಿಂದ ಕಾಡಿರುವ ಅನಾರೋಗ್ಯ ಹಾಗೂ ಕೌಟುಂಬಿಕ ಕಾರಣಗಳಿಂದ ಈ ರೀತಿಯ ನಿವೃತ್ತಿಯ ಘೋಷಣೆ ಮಾಡಬೇಕಾಯಿತು ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

Advertisement

ನನ್ನ ನಿರ್ಧಾರದ ಹಿಂದೆ ಯಾರದ್ದೇ ಒತ್ತಡ ಇಲ್ಲ. ಕೆಲವು ಹಿರಿಯರು ಈ ಬಾರಿ ಚುನಾವಣೆಯ ಸ್ಪರ್ಧೆ ಬೇಡ ಎಂದು ಸಲಹೆ ನೀಡಿದ್ದರಷ್ಟೇ. ನನ್ನ ನಿರ್ಧಾರದ ಕುರಿತು ಪಕ್ಷದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಹಾಗೂ ಹಿರಿಯರಾದ ವೈ.ಎಸ್.ವಿ.ದತ್ತ ಅವರನ್ನು ಸಂಪರ್ಕಿಸುವ ಪ್ರಯತ್ನ ನಡೆಸಿದರೂ ಯಶಸ್ವಿಯಾಗಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಜಾತ್ಯಾತೀತ ಶಕ್ತಿಗಳನ್ನು ಬೆಂಬಲಿಸಬೇಕು ಎಂಬುದಷ್ಟೇ ನನ್ನ ವೈಯಕ್ತಿಕ ನಿಲುವು. ಚುನಾವಣೆಗೆ ಸ್ಪರ್ಧಿಸಿದಾಗ ಬಿಜೆಪಿಯ ಹಾಲಪ್ಪ ಅವರಿಂದ ಹಣ ಪಡೆದೆ ಎಂದು ವದಂತಿ ಹಬ್ಬಿತ್ತು. ಈಗ ಬೇಳೂರು ಅವರ ಆಮಿಷಕ್ಕೆ ಬಲಿಯಾದೆ ಎಂಬ ವದಂತಿ ಹರಡಬಹುದು. ನಾನು ಯಾರಿಂದಲೂ ಹಣ ಪಡೆದಿಲ್ಲ. ಒಂದೊಮ್ಮೆ ಹಣ ಕೊಟ್ಟವರು ನಾನು ನಿವೃತ್ತನಾದರೆ ಸುಮ್ಮನೆ ಬಿಡುತ್ತಾರೆಯೇ ಎಂಬುದನ್ನಾದರೂ ಯೋಚಿಸಬೇಕು. ತಾಲೂಕು ಜೆಡಿಎಸ್ ಕಣದಲ್ಲಿರುವ ಯಾವ ಅಭ್ಯರ್ಥಿಯನ್ನು ಬೆಂಬಲಿಸಬೇಕು ಎಂದು ಘೋಷಿಸುವ ಅಧಿಕಾರ ತಾಲೂಕು ಅಧ್ಯಕ್ಷ ಕನ್ನಪ್ಪ ಹಾಗೂ ಇತರ ಪದಾಧಿಕಾರಿಗಳದ್ದೇ ವಿನಾ ನನ್ನದಲ್ಲ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next