Advertisement

Safe: ಮುಖ್ಯ ಚುನಾವಣ ಆಯುಕ್ತ ರಾಜೀವ್‌ ಕುಮಾರ್‌ ರಕ್ಷಿಸಿದ ಬೆಂಗಳೂರು ಚಾರಣಿಗ

02:16 AM Oct 19, 2024 | Team Udayavani |

ಡೆಹ್ರಾಡೂನ್‌: ಶೂನ್ಯಕ್ಕಿಂತ ಕಡಿಮೆ ತಾಪಮಾನವಿರುವ ಪ್ರದೇಶದಲ್ಲಿ ಹೆಲಿಕಾಪ್ಟರ್‌ ತುರ್ತು ಭೂಸ್ಪರ್ಶ ಮಾಡಿದ್ದ ಕಾರಣ ಮುಖ್ಯ ಚುನಾವಣ ಆಯುಕ್ತ ರಾಜೀವ್‌ ಕುಮಾರ್‌ ಮತ್ತಿತರ ಚುನಾವಣಾಧಿಕಾರಿಗಳು ಅಲ್ಲೇ ಒಂದು ರಾತ್ರಿ ಕಳೆದಿದ್ದಾರೆ. ಅವರಿಗೆ ಬೆಂಗಳೂರಿನ ಚಾರಣಿಗ ಹಾಗೂ ಜತೆಗಾರರು ನೆರವು ನೀಡಿದ್ದಾರೆ.

Advertisement

ಹವಾಮಾನ ವೈಪರೀತ್ಯದಿಂದಾಗಿ ಉತ್ತರಾಖಂಡದ ರಾಲಂ ಎಂಬ ಹಳ್ಳಿಯಲ್ಲಿ ಬುಧವಾರ ಮಧ್ಯಾಹ್ನ ಚುನಾವಣಾಧಿಕಾರಿಗಳಿದ್ದ ಹೆಲಿಕಾಪ್ಟರ್‌ ಅನ್ನು ತುರ್ತು ಭೂಸ್ಪರ್ಶ ಮಾಡಿತ್ತು. 12 ಸಾವಿರ ಅಡಿ ಎತ್ತರದಲ್ಲಿನ ಈ ಪ್ರದೇಶದಲ್ಲಿ ರಾತ್ರಿ ಕಳೆಯಲು ಅಧಿಕಾರಿಗಳು ಹರಸಾಹಸ ಪಟ್ಟಿದ್ದಾರೆ. ಅಷ್ಟು ಎತ್ತರದ ಪ್ರದೇಶದಲ್ಲಿ ಅವರ ಸಂಪರ್ಕಕ್ಕಿದ್ದದ್ದು ಸ್ಯಾಟಲೈಟ್‌ ಫೋನ್‌ ಮಾತ್ರ.

ಈ ವೇಳೆ ಅವರ ಸಹಾಯಕ್ಕೆ ಬಂದ ಬೆಂಗಳೂರು ಮೂಲದ ಚಾರಣಿಗ ಹಾಗೂ ಅವರ ಸಂಗಡಿಗರು ಇಡೀ ರಾತ್ರಿ ಚಳಿ ತಡೆ ಯಲು ಬೆಂಕಿ ಹಚ್ಚಿ, ನೂಡಲ್ಸ್‌ ತಯಾರಿಸಿ ನೀಡಿದ್ದಾರೆ. ಬಳಿಕ ಗುರುವಾರ ಉತ್ತರಾಖಂಡ ರಾಜ್ಯ ವಿಪತ್ತು ನಿರ್ವಹಣ ಘಟಕ ಸಿಬಂದಿ ಚುನಾವಣ ಆಯುಕ್ತ ಹಾಗೂ ಅಧಿಕಾರಿಗಳನ್ನು ರಕ್ಷಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next