Advertisement

ನಿಗದಿತ ಅವಧಿಗೇ ಶಬರಿಮಲೆ ಏರ್‌ಪೋರ್ಟ್‌ ಪೂರ್ಣ: ಕೇರಳ ಸಿಎಂ

06:23 PM Oct 08, 2021 | Team Udayavani |

ತಿರುವನಂತಪುರ: ಶಬರಿಮಲೆಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ವಿಮಾನ ನಿಲ್ದಾಣ ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿಯೇ ಪೂರ್ತಿಗೊಳಿಸಲಾಗುತ್ತದೆ.

Advertisement

ಈ ಬಗ್ಗೆ ವಿಧಾನಸಭೆಯಲ್ಲಿ ಮಾತನಾಡಿದ ಕೇರಳ ಸಿಎಂ ಪಿಣರಾಯಿ ವಿಜಯನ್‌ ಲೂಯಿಸ್‌ ಬರ್ಜರ್‌ ಕನ್ಸಲ್ಟಿಂಗ್‌ ಪ್ರೈ.ಲಿ ಯೋಜನೆ ಬಗ್ಗೆ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ವರದಿ ಸಲ್ಲಿಸಿದೆ ಎಂದಿದ್ದಾರೆ.

ಶಬರಿಮಲೆ ದೇಗುಲದಿಂದ 48 ಕಿಮೀ ದೂರದಲ್ಲಿರುವ ಚೆರುವಲ್ಲಿಯಲ್ಲಿರುವ 2,200 ಎಕರೆ ಪ್ರದೇಶದಲ್ಲಿ ಏರ್‌ಪೋರ್ಟ್‌ ನಿರ್ಮಾಣವಾಗಲಿದೆ.

ಕಲ್ಲಿಕೋಟೆ, ಮಂಗಳೂರುಗಳಂತೆ ಈ ಪ್ರದೇಶವೂ ಬೆಟ್ಟದಿಂದ ಕೂಡಿದ ಪ್ರದೇಶ ಎಂದು ಡಿಜಿಸಿಎ ಕಳೆದ ವಾರ ಆತಂಕ ವ್ಯಕ್ತಪಡಿಸಿದೆ.

ಇದನ್ನೂ ಓದಿ:ಅಕ್ಟೋಬರ್ 13 ಕ್ಕೆ OnePlus 9RT ಬಿಡುಗಡೆ: ಇದರ ಬೆಲೆ ಎಷ್ಟು ಗೊತ್ತಾ ?

Advertisement
Advertisement

Udayavani is now on Telegram. Click here to join our channel and stay updated with the latest news.

Next