Advertisement

ಮಹಾನ್ ನಾಯಕರೊಬ್ಬರಿಂದ ನನಗೆ ಟಿಕೆಟ್ ತಪ್ಪಿದೆ: ಎಸ್.ಐ.ಚಿಕ್ಕನಗೌಡ

03:13 PM Apr 12, 2023 | Team Udayavani |

ಹುಬ್ಬಳ್ಳಿ: ಸಂದರ್ಭ ಬಂದರೆ ಕಾಂಗ್ರೆಸ್ ನಿಂದ ಯಾಕೆ ಸ್ಪರ್ಧೆ ಮಾಡಬಾರದು. ಮಹಾನ್ ನಾಯಕರೊಬ್ಬರಿಂದ ನನಗೆ ಟಿಕೆಟ್ ತಪ್ಪಿದೆ, ಬಿಜೆಪಿಗೆ ರಾಜೀನಾಮೆ ನೀಡುತ್ತೇನೆ ಎಂದು ಮಾಜಿ ಶಾಸಕ ಎಸ್.ಐ.ಚಿಕ್ಕನಗೌಡ್ರ ತಿಳಿಸಿದರು.

Advertisement

ಅದರಗುಂಚಿಯಲ್ಲಿ ಬೆಂಬಲಿಗರ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು ಸಮೀಕ್ಷೆಯಲ್ಲೂ ನನ್ನ ಹೆಸರು ಪ್ರಮುಖವಾಗಿದ್ದರೂ ಜಿಲ್ಲೆಯ ಮಹಾನ್ ನಾಕರೊಬ್ಬರಿಂದ ಟಿಕೆಟ್ ತಪ್ಪಿದೆ. ಈಗ ಟಿಕೆಟ್ ನೀಡಿದ ವ್ಯಕ್ತಿ ಬದಲು ಮಹಾನ್ ನಾಯಕರೆ ಬಂದು ಸ್ಪರ್ಧಿಸಬಹುದಾಗಿತ್ತು. ಡಾ.ಮಲ್ಲಿಕಾರ್ಜುನ ಬಾಳಿಕಾಯಿ, ಬಸವರಾಜ ಕುಂದಗೋಳ ಮಠ ಅವರಿಗೂ ಟಿಕೆಟ್ ನೀಡಿದರೆ ನಾನೆ ಖುಷಿಯಿಂದ ಹಿಂದೆ ಸರಿದು  ಗೆಲುವಿಗೆ ಶ್ರಮಿಸುದ್ದೆ. ಟಿಕೆಟ್  ಖಚಿತ ಎಂದು ತಯಾರಿ ನಡೆಸಿದ್ದೆ.ಆದರೆ ನನ್ನ ವಿರುದ್ದ ಷಡ್ಯಂತ್ರ ನಡೆಸಿದರು.

ಇದನ್ನೂ ಓದಿ: ಕೈ ತಪ್ಪಿದ ಟಿಕೆಟ್:‌ ಮಾಜಿ ಶಾಸಕ ಎಸ್.ಐ.ಚಿಕ್ಕನಗೌಡ ಅಭಿಮಾನಿಗಳ ಆಕ್ರೋಶ

ನನ್ನ ಸ್ಪರ್ಧೆ ಖಚಿತ ಇದರಲ್ಲಿ ಯಾವ ಬದಲಾವಣೆ ಇಲ್ಲ.ಪಕ್ಷ ಅಥವಾ ಪಕ್ಷೇತರವೋ ಎಂಬುದನ್ನು ಚರ್ಚಿಸಿ ತೀರ್ಮಾನಿಸುತ್ತೇನೆ ಎಂದರು.

ಚಿಕ್ಕನಗೌಡ್ರ ಗೆ ಟಿಕೆಟ್ ತಪ್ಪಿದನ್ನು ಖಂಡಿಸಿ ಬೆಂಬಲಿಗರು ಹುಬ್ಬಳ್ಳಿ-ಲಕ್ಷ್ಮೇಶ್ವರ ಹೆದ್ದಾರಿ ತಡೆ ನಡೆಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next