Advertisement

ಉದ್ಯೋಗ ಖಾತ್ರಿ ಕೂಲಿ 200 ದಿನಕ್ಕೆ ಹೆಚ್ಚಿಸಲು ಆಗ್ರಹ

09:20 PM Nov 04, 2020 | Suhan S |

ಮುಂಡರಗಿ: ರಾಜ್ಯದ ಲಕ್ಷಾಂತರ ಕಾರ್ಮಿಕರು ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿಯನ್ನು 200 ಮಾನವ ದಿನಗಳಿಗೆ ಹೆಚ್ಚಿಸುವುದು ಮತ್ತು ತಲಾ 5 ಕೆಜಿ ಹೆಚ್ಚಿಗೆ ಪಡಿತರ ವಿತರಣೆ ಮಾಡುವಂತೆ ಆಗ್ರಹಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ಸದಸ್ಯರು ಧರಣಿ ನಡೆಸಿದರು.

Advertisement

ಗ್ರಾಮೀಣ ಮಹಿಳಾ ಸಂಘಟನೆಯ ತಾಲೂಕು ಘಟಕದ ಕಾರ್ಮಿಕರು ಭೀಮರಾವ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರ್‌ ಕಾರ್ಯಾಲಯಕ್ಕೆ ತೆರಳಿ, ತಹಶೀಲ್ದಾರ್‌ಆಶಪ್ಪ ಪೂಜಾರ ಅವರಿಗೆ ಮನವಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ಧರಣಿನಿರತರು, ಲಾಕ್‌ಡೌನ್‌ ಮತ್ತು ಕೋವಿಡ್‌ 19ರ ಕಾರಣಕ್ಕೆ ಲಕ್ಷಾಂತರ ವಲಸೆ ಕಾರ್ಮಿಕರು ಕೆಲಸವಿಲ್ಲದೇ ತಮ್ಮ ಗ್ರಾಮಗಳಿಗೆ ಮರಳಿ ಬಂದಿದ್ದಾರೆ. ಸಾವಿರಾರು ಕುಟುಂಬಗಳು ಈಗಾಗಲೇ ನೂರು ದಿನಗಳ ಕೂಲಿ ಕೆಲಸ ಮುಗಿಸಿದ್ದಾರೆ. ಮರು ವಲಸೆ ಬಂದಕುಟುಂಬದ ಸದಸ್ಯರು ಯಾವುದೇ ಉದ್ಯೋಗ ಇಲ್ಲದೇ ಆಹಾರ ಧಾನ್ಯ ಕೊರತೆಯಿಂದ ತೀವ್ರ ಸಂಕಷ್ಟದಲ್ಲಿದ್ದಾರೆಎಂದು ಅಳಲು ತೋಡಿಕೊಂಡರು. ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ, ರಾಜಾಭಕ್ಷಿ ಬೆಟಗೇರಿ ಮಾತನಾಡಿದರು. ನಂತರ ತಹಶೀಲ್ದಾರ್‌ ಆಶಪ್ಪ ಪೂಜಾರಿ ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಪ್ರಸಾದ, ತಾಲೂಕ ಸಂಘಟನೆ ಅಧ್ಯಕ್ಷ ವಿಜಯಲಕ್ಷ್ಮೀ ಕಟಿಗಾರ, ವನಜಾಕ್ಷಿ ಹವಳದ, ಜೆ.ಎಸ್‌. ಕಂತಿ, ಪಿ.ಎಸ್‌.ಹವಳದ, ಚೈತ್ರಾ ಹವಳದ, ದಾಕ್ಷಾಯಿಣಿ ಹವಳದ, ಪಿ.ಬಿ.ಹವಳದ, ಶೋಭಾ ಪೂಜಾರ, ಶಾಂತಾ ಪೂಜಾರ, ದೇವಕ್ಕ ಡಂಬಳ, ಪಾರವ್ವ ಕಂತಿ, ಲಲಿತಾ ಕಂತಿ, ಶಾಂತಾ ಕಂತಿ, ಲಕ್ಷ್ಮವ್ವ ಗೋಡಿ, ಗೀತಾ ಗೋಡಿ,

ಎಸ್‌.ಐ.ಬಿಜಾಪೂರ, ಆರ್‌.ಪಿ. ಮೇವುಂಡಿ, ಲಕ್ಷ್ಮವ್ವ ಬದಾಮಿ, ಸುಮಿತ್ರಾ ಪೂಜಾರ, ಲಲಿತಾಹಕ್ಕಂಡಿ, ಎಸ್‌. ಎಸ್‌.ಲಿಂಗಶೆಟ್ಟರ, ಶಿವಲೀಲಾ ಬಾಲಣ್ಣವರ, ಗೀತಾಂಜಲಿ ರೋಣ, ಚನ್ನಬಸಮ್ಮ ರೋಣ, ರೇಣವ್ವ ಮಡಿವಾಳ, ಮಾಲನಬಿ ತಹಶೀಲ್ದಾರ್‌, ರೇಣುಕಾ ಕಲ್ಲಳ್ಳಿ, ಶಶಿಕಲಾ ಹೂಗಾರ, ಬಿಸ್ನಳ್ಳಿ, ಜುಬೇದವ್ವಾ ನದಾಫ, ಅನಸವ್ವ ರೋಣದ, ದರೀಯಾಬಿ ಗೊರಲರಕೊಪ್ಪ, ಕೆಂಚವ್ವ ಹರಿಜನ, ದುರಗವ್ವ ಹರಿಜನ, ಶಿವವ್ವ ಹರಿಜನ, ಶಿವಲಿಂಗವ್ವ ಹರಿಜನ,ಗಂಗವ್ವ ಹರಿಜನ, ಶಿವಮ್ಮ ಬಿಸನಳ್ಳಿ ಮತ್ತಿತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next