Advertisement

ಮೀನು ಬೇಟೆಯಲ್ಲಿ ತೊಡಗಿದ‌ ಗ್ರಾಮೀಣ ತಂಡ

11:15 PM Jun 19, 2020 | Sriram |

ತೆಕ್ಕಟ್ಟೆ ತಾಲೂಕಿನಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯ ನಡುವೆ ಮಲ್ಯಾಡಿ ಸುತ್ತಮುತ್ತಲ ಹೊಳೆಸಾಲುಗಳಲ್ಲಿ ನೀರಿನ ಒಳ ಹರಿವು ಹೆಚ್ಚಾಗಿದ್ದು ಹಿಂಡಾಗಿ ಮೀನುಗಳು ಸಾಗಿ ಬಂದ ಹಿನ್ನೆಲೆಯಲ್ಲಿ ಸ್ಥಳೀಯ ಗ್ರಾಮೀಣ ಯುವಕರ ತಂಡವೊಂದು ಕಳೆದ ಮೂರು ದಿನದಿಂದ ಮೀನಿನ ಬೇಟೆಯಲ್ಲಿ ತೊಡಗಿತ್ತು.

Advertisement

ದೊಡ್ಡ ಗಾತ್ರದ ಮೀನುಗಳು
ಧಾರಾಕಾರವಾಗಿ ಸುರಿದ ಮಳೆಯ ಪರಿಣಾಮ ಗ್ರಾಮೀಣ ಭಾಗದ ತಗ್ಗು ಪ್ರದೇಶದಲ್ಲಿ ಹಾದು ಹೋಗುವ ಹೊಳೆ ಸಾಲುಗಳಲ್ಲಿ ಅಪಾರ ಪ್ರಮಾಣದ ಮೀನುಗಳು ಕಾಣಸಿಗುತ್ತಿವೆ.

ಐರ್‌, ಕಾಟ್ಲಾ , ಕೆಂಬೇರಿ, ಶಾಡಿ, ಮುಯಿಡಾ ಜಾತಿಗೆ ಸೇರಿದ ಭಾರೀ ಬೇಡಿಕೆಯ ಮೀನುಗಳು ಕಳೆದೆರಡು ದಿನಗಳಿಂದ ಅಲಲ್ಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇದನ್ನೇ ಗುರಿಯಾಗಿಸಿಕೊಂಡು ಇಲ್ಲಿನ ಹರೀಶ್‌, ಪ್ರಶಾಂತ್‌, ರಾಘವೇಂದ್ರ, ಶ್ರೀನಿವಾಸ, ಸುಧೀರ್‌, ಚಂದ್ರ, ನವೀನ್‌, ದಾಸ್‌ ಸೇರಿದಂತೆ ಗ್ರಾಮೀಣ ಯುವಕರ ತಂಡ ಮಾಲಾಡಿ, ಮಲ್ಯಾಡಿ ಭಾಗಗಳಲ್ಲಿ ಬಲೆ ಬೀಸಿ ಮೀನು ಹಿಡಿದಿದ್ದಾರೆ.

ಮೀನಿಗೆ ಹೆಚ್ಚಿದ ಬೇಡಿಕೆ
ಸುಮಾರು ಒಂದು ಮೀನು ಮೂರು ಕೆ.ಜಿ.ಗೂ ಅಧಿಕ ತೂಕವಿದ್ದು, ಸುಮಾರು 500 ರೂ.ಯಿಂದ 600 ರೂ.ಗೂ ಅಧಿಕ ಬೆಲೆ ಇದೆ. ಪ್ರಸ್ತುತ ಸಮುದ್ರ ಮೀನುಗಾರಿಕೆ ನಿಷೇಧವಿರುವುದರಿಂದ ಗ್ರಾಮೀಣ ಭಾಗದಲ್ಲಿ ತಾಜಾ ಬಲೆ ಮೀನಿಗೆ ಬೇಡಿಕೆ ಹೆಚ್ಚಿದೆ.

25 ಕೆ.ಜಿ.ಗೂ ಅಧಿಕ ಕಾಟ್ಲಾ ಮೀನು
ಪ್ರತಿ ವರ್ಷದಂತೆ ಈ ಬಾರಿಯೂ ನಾಲ್ಕೈದು ಮಂದಿ ಸ್ನೇಹಿತರು ಒಗ್ಗೂಡಿ ಹವ್ಯಾಸಕ್ಕಾಗಿ ಮೀನು ಹಿಡಿಯುತ್ತಿದ್ದೇವೆ. ಸುಮಾರು 250 ಕೆ.ಜಿ.ಗೂ ಅಧಿಕ ದೊಡ್ಡ ಗಾತ್ರದ ಕಾಟ್ಲಾ ಮೀನುಗಳು ಬಲೆಗೆ ಬಿದ್ದಿವೆ. ಈ ಹೊಳೆ ಮೀನಿಗೆ ಭಾರೀ ಬೇಡಿಕೆ ಇದೆ.
– ಶ್ರೀನಿವಾಸ ಮಲ್ಯಾಡಿ,
ಮೀನು ಹಿಡಿಯುವ ಹವ್ಯಾಸಿ ತಂಡ

Advertisement
Advertisement

Udayavani is now on Telegram. Click here to join our channel and stay updated with the latest news.

Next