Advertisement

ಗ್ರಾಮೀಣಕೂ ಗಾಂಜಾ ಗಾಟು

12:53 PM Apr 05, 2021 | Team Udayavani |

 

Advertisement

ಕುದೂರು: ಪಕ್ಕದ ಬೆಂಗಳೂರು ನಗರಕ್ಕೆ ಸಮೀತವಾಗಿದ್ದ ಗಾಂಜಾ ಮಾರಾಟ ಜಾಲಾ ಇದೀಗ ಮಾಗಡಿ ತಾಲೂಕಿಗೂ ವ್ಯಾಪ್ತಿಸಿದೆ. ಜಾಲವೊಂದು ಕುದೂರು ಸುತ್ತಮುತ್ತ ಪ್ರದೇಶದಲ್ಲಿ ಗಾಂಜಾ, ಅಫೀಮು ಯುವಜನರ ಕೈಗೆ ತಲುಪಿಸುವ ಕೆಲಸ ಮಾಡುತ್ತಿದೆ ಎಂಬ ಸುದ್ದಿ ಸಾರ್ವಜನಿಕ ವಲಯದಲ್ಲಿ ಹರಿ ದಾಡುತ್ತಿದೆ.

ಮಾಗಡಿ ಪಟ್ಟಣದಿಂದ ಕು ದೂರು ಇತರೆಡೆಗೆ ಗಾಂಜಾ, ಅಫೀಮು ಅನ್ನು ಜಾಲವೊಂದು ಸರಬರಾಜು ಮಾಡುತ್ತಿದೆ. ಸಣ್ಣ ಕವರ್‌ನಲ್ಲಿ ಗಾಂಜಾವನ್ನು ತುಂಬಿ ಅದನ್ನು250 ರೂ.ನಿಂದ 300 ರೂ.ಗೆ ಮಾರಾಟ ಮಾಡುತ್ತಿದೆ ಎಂಬ ಸುದ್ದಿ ಇದೆ. ಈ ಸಂಬಂಧ ಈಗಾಗಲೇ ಪೊಲೀಸರ ಗಮನಕ್ಕೆ ಬಂದಿದ್ದು, ಜಾಲವನ್ನು ಭೇದಿಸಬೇಕಿದೆ.

ಟೀ ಅಂಗಡಿಯಲ್ಲೂ ಮಾರಾಟ?: ಕುದೂರು ಮೂಲದ ಇಬ್ಬರು ಯುವಕರು ಮಾ.30ರಂದು ಮಾಗಡಿಗೆ ಗಾಂಜಾ ಖರೀದಿಸಲು ಬಂದು ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದರು. ಇವರೇಗ್ರಾಮೀಣ ಪ್ರದೇಶಕ್ಕೂ ಗಾಂಜಾ ಸರಬರಾಜು ಮಾಡುತ್ತಿದ್ದರು ಎಂಬ ಅನುಮಾನವೂಮೂಡಿದೆ. ಕುದೂರಿಗೆ ಮಾಗಡಿಯಿಂದ ಗಾಂಜಾ ಸರಬರಾಜು ಮಾಡುವ ಏಜೆಂಟರಿದ್ದಾರೆ ಎನ್ನಲಾಗಿದೆ.

ಕೆಲವು ಏಜೆಂಟರುಗಳು ಕುದೂರಿನ ಬೀಡಾ, ಟೀ ಅಂಗಡಿಗಳಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದರೆ, ಇನ್ನು ಕೆಲವರು ತಮ್ಮ ಲಿಂಕ್‌ನಲ್ಲಿರುವ ಯುವಕರಿಗೆ ಕರೆ ಮಾಡಿಮಾಗಡಿಗೆ ಕರೆಯಿಸಿಕೊಂಡು ನೇರವಾಗಿ ಗಾಂಜಾ ಮಾರಾಟ ಮಾಡುತ್ತಿದ್ದಾರೆ. ಪೊಲೀಸರಿಗೆ ಮಾಹಿತಿ ನೀಡಿ: ಮಾದಕ ವಸ್ತು ಗಳ ಬಳಕೆ ವಿರುದ್ಧ ಹೋರಾಟ ಮಾಡಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ಯುವ ಸಮುದಾಯವನ್ನು ವ್ಯಸನದಿಂದ ಹೊರತರುವ ಸಲುವಾಗಿ ಗ್ರಾಮೀಣ ಜನರು ಪೊಲೀಸರೊಂದಿಗೆ ಕೈಜೋಡಿಸಬೇಕಿದೆ. ಈ ಹಿನ್ನೆಲೆಯಲ್ಲಿ ತಮ್ಮ ಸುತ್ತಮುತ್ತ ಪ್ರದೇಶಗಳಲ್ಲಿ ಗಾಂಜಾ ಮಾರಾಟ ಮಾಡುವ ಮಾಹಿತಿ ತಿಳಿದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು. ಇದರಿಂದ ಕಾರ್ಯಾಚರಣೆಗೆ ಅನುಕೂಲವಾಗಲಿದೆ.

Advertisement

ಮಕ್ಕಳ ಮೇಲೆ ನಿಗಾ ಇರಲಿ: ಗಾಂಜಾ ನಶೆಗೆ ಯುವ ಸಮುದಾಯ ಆಕರ್ಷಿತರಾಗುತ್ತಿರುವು  ದಕ್ಕೆ ಪಾಲಕರು, ಮಕ್ಕಳ ಮೇಲೆ ಹೆಚ್ಚಿನ ನಿಗಾ ಇರಿಸದಿರುವುದು ಪ್ರಮುಖ ಕಾರಣ ಎನ್ನುವ ಮಾತುಗಳು ಕೇಳಿ ಬಂದಿವೆ. ಈ ಹಿನ್ನೆಲೆಯಲ್ಲಿ ಪಾಲಕರು ಮಕ್ಕಳಚಲನವಲನ, ಯಾರೊಂದಿ ಗೆ ಸ್ನೇಹ ಬೆಳೆಸಿದ್ದಾರೆ ಎನ್ನುವ ಬಗ್ಗೆ ತಿಳಿದುಕೊಂಡಿರಬೇಕು. ಇಲ್ಲವಾದರೆ ಮಕ್ಕಳು ಕುಟುಂಬ ಕ್ಕೆ ಮಾತ್ರವಲ್ಲದೆ, ಸಮಾಜಕ್ಕೂ ಹೊರೆಯಾಗುವುದು ನಿಶ್ಚಿತ.

ಗ್ರಾಮೀಣ ಭಾಗಕ್ಕೂ ಹಬ್ಬಿದೆ ವ್ಯಸನ: ನಗರ ಪ್ರದೇಶಕ್ಕೆ ಸೀಮಿತ ಆಗಿದ್ದ ಗಾಂಜಾ ಸೇವನೆ ಇದೀಗ ಗ್ರಾಮೀಣ ಭಾಗಕ್ಕೂ ವ್ಯಾಪಿಸುತ್ತಿದೆ.ವಸತಿರಹಿತ ಪ್ರದೇಶ, ಶಾಲಾ ಮೈದಾನಗಳುವ್ಯಸನಿಗಳು ಮತ್ತು ಪೂರೈಕೆದಾರರ ನೆಚ್ಚಿನ ತಾಣಗಳಾಗಿವೆ.

ಗ್ರಾಮೀಣ ಪ್ರದೇಶಕ್ಕೆ ಗಾಂಜಾ ಮಾರಾಟ ಮಾಡುವವರ ಬಗ್ಗೆಇಲಾಖೆಗೆ ಮಾಹಿತಿ ಇದೆ. ಸಿಬ್ಬಂದಿಈಗಾಗಲೇ ಕಾರ್ಯಪ್ರವೃತ್ತರಾಗಿ ದ್ದಾರೆ. ಕೆಲವರನ್ನು ಬಂಧಿಸಿದ್ದಾರೆ. ಸದ್ಯದಲ್ಲಿಯೇ ಉಳಿದವರನ್ನು ವಶಕ್ಕೆಪಡೆಯಲಾಗುವುದು.  ● ಎಸ್‌.ಗಿರೀಶ್‌, ಎಸ್ಪಿ.

ಗ್ರಾಮೀಣ ಪ್ರದೇಶಗಳಿಗೆ ಗಾಂಜಾ ಸರಬರಾಜು ಮಾಡುವವರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು. ವ್ಯಸನಿಗಳನ್ನು ಹಿಡಿದು ವಿಚಾರಿಸಿ ಗಾಂಜಾ ಸಿಗುವ ಮೂಲ ಪತ್ತೆ ಹಚ್ಚಬೇಕು. ಯತಿರಾಜು, ತಾಪಂ ಮಾಜಿ ಅಧ್ಯಕ್ಷ.

Advertisement

Udayavani is now on Telegram. Click here to join our channel and stay updated with the latest news.

Next