Advertisement

ಗಿಡಗಂಟಿಗಳಿಂದ ಆವೃತವಾಗಿ ಪಾಳುಬಿದ್ದ ಕಟ್ಟಡ

07:43 PM Oct 01, 2021 | Team Udayavani |

ವಿಶೇಷ ವರದಿತೆಕ್ಕಟ್ಟೆ : ಹಾರ್ದಳ್ಳಿ ಮಂಡಳ್ಳಿ ಗ್ರಾ.ಪಂ. ವ್ಯಾಪ್ತಿಯ ಮಣಿಗೇರಿ ಎಂಬಲ್ಲಿ ಅಕ್ಷರ ಕರಾವಳಿ ಸದನದ ನಿರಂತರ ಶಿಕ್ಷಣ
ಕೇಂದ್ರದ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದ್ದು ನಿರ್ವಹಣೆ ಇಲ್ಲದೆ ಸೊರಗಿದೆ.

Advertisement

1994 ಎ.15ರಂದು ಅಂದಿನ ಕುಂದಾಪುರದ ಮಾಜಿ ಶಾಸಕ ಕೆ. ಪ್ರತಾಪ್‌ಚಂದ್ರ ಅವರು ಉದ್ಘಾಟಿಸಿ ಗ್ರಾಮೀಣ ಭಾಗದ ಜನತೆಗೆ ನಿರಂತರ ಸಾಕ್ಷರತ ಶಿಕ್ಷಣ ನೀಡುವ ನಿಟ್ಟಿನಿಂದ ಆರಂಭವಾದ ಈ ಕಟ್ಟಡದ ಮೇಲ್ಛಾವಣಿ ಧರಾಶಾಯಿಯಾಗಿ ಸಂಪೂರ್ಣ ಶಿಥಿಲಗೊಂಡು ಗಿಡಗಂಟಿಗಳಿಂದ ಆವೃತ ವಾಗಿದೆ. ಪ್ರಸ್ತುತ ಇದು ಮಣಿಗೇರಿ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿದ್ದು ಅನ್ಯ ಚಟುವಟಿಕೆಗಳ ಆಶ್ರಯ ತಾಣವಾಗಿದೆ.

1992ರಲ್ಲಿ ತೆಂಗಿನ ಗರಿಯ ಚಪ್ಪರದಡಿಯಲ್ಲಿ ಆರಂಭವಾದ ಈ ಕೇಂದ್ರಕ್ಕೆ 1994ರಲ್ಲಿ ಕಟ್ಟಡ ನಿರ್ಮಾಣವಾಗಿ ಕೇಂದ್ರ ಸರಕಾರದ ಸಾಕ್ಷರತ ಆಂದೋಲನದಡಿ ಯಲ್ಲಿ ಪರಿಸರದ ವಯಸ್ಕರಿಗಾಗಿ ರಾತ್ರಿ ಶಾಲೆ (ವಯಸ್ಕರ ಶಿಕ್ಷಣ) ಆರಂಭ ವಾಗಿ ಅನಂತರ ಹಿಂದುಳಿದ ಅನಕ್ಷರಸ್ಥರ ಮಕ್ಕಳಿಗೂ ಕೂಡ ಶಿಕ್ಷಣದ ಬಗ್ಗೆ ಅರಿವು ಮೂಡಿಸುವ ಕಾರ್ಯ ನಡೆಯುತ್ತಿತ್ತು. ಅನಂತರ ಸ್ಥಳೀಯಸಂಘ ಸಂಸ್ಥೆಗಳ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮ ಸೇರಿದಂತೆ ಪ್ರತೀ ಶುಕ್ರವಾರ ಭಜನ ಕಾರ್ಯಕ್ರಮ ನಡೆಯುತ್ತಿತ್ತು. ಅನಂತರ ಸಮೀಪದಲ್ಲಿ ಇರುವ ಕಿ.ಪ್ರಾ. ಶಾಲೆಯಲ್ಲಿ ವಿದ್ಯಾರ್ಥಿಗಳು ಸೇರ್ಪಡೆಗೊಂಡಾಗ ಇಲ್ಲಿ ಚಟುವಟಿಕೆ ನಿಂತುಹೋಗಿದೆ.

ಇದನ್ನೂ ಓದಿ:ಸಿಂದಗಿ ಉಪ ಚುನಾವಣೆ : ನಾಜಿಯಾ ಶಕೀಲಾ ಅಂಗಡಿ ಜೆಡಿಎಸ್ ಅಭ್ಯರ್ಥಿ

ಫ‌ಲಕದ ಮೂಲ ಸ್ವರೂಪ ಮಾಯ
ಹಿಂದೆ ಬಿದ್ಕಲ್‌ಕಟ್ಟೆ ಮಂಡಲ ಪಂಚಾಯತ್‌ ಇರುವ ಸಂದರ್ಭ ದಲ್ಲಿ ಮಾಜಿ ಅಧ್ಯಕ್ಷ ಎಂ. ಆನಂದ ಶೆಟ್ಟಿ ಅವರ ಅವಧಿಯಲ್ಲಿ ಸ್ಥಾಪಿತಗೊಂಡ ಈ ಕೇಂದ್ರದಲ್ಲಿ ಕಲಿಕೆ ಚಟುವಟಿಕೆಗೆ ಪೂರಕವಾಗಿ ಗೋಡೆಗೆ ಅಳವಡಿಸಿದ ಕರಿಹಲಗೆ (ಬ್ಲಾಕ್‌ ಬೋರ್ಡ್‌) ಹಾಗೂ ವಿವಿಧ ಇಲಾಖೆಯಿಂದ ನಡೆದಿರುವ ಕಾಮಗಾರಿಯ ವಿವರ ಒಳಗೊಂಡಿರುವ ಫಲಕಗಳ ಮೂಲ ಸ್ವರೂಪ ಮಾಯವಾಗಿದೆ.

Advertisement

ಅನುದಾನದ ಕೊರತೆ
ಈ ಹಿಂದೆ ಈ ಶಿಕ್ಷಣ ಕೇಂದ್ರದಲ್ಲಿ ನಿರಂತರ ಕಲಿಕೆ ಚಟುವಟಿಕೆಗಳು ನಡೆಯುತ್ತಿದ್ದವು. ಆದರೆ ಬದಲಾದ ವ್ಯವಸ್ಥೆಯಲ್ಲಿ ಇದು ಕಡಿಮೆಯಾಗುತ್ತಾ ಬಂದಿದ್ದು, ಕಟ್ಟಡಗಳ ಮೇಲ್ಛಾವಣಿ ಶಿಥಿಲಗೊಂಡಿದೆ. ಇದರ ಬಗ್ಗೆ ಗ್ರಾ.ಪಂ.ನಲ್ಲಿ ಚರ್ಚಿಸಲಾಗಿದೆ. ಆದರೆ ಕಟ್ಟಡ ನಿರ್ವಹಣೆಗೆ ಬೇಕಾಗುವಷ್ಟು ಅನುದಾನದ ಕೊರತೆ ಇರುವುದರಿಂದ ಈ ಹಿಂದೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೂ ತರಲಾಗಿದೆ.
-ರೇಖಾ, ಪಿಡಿಒ,
ಹಾರ್ದಳ್ಳಿ ಮಂಡಳ್ಳಿ ಗ್ರಾ.ಪಂ.

Advertisement

Udayavani is now on Telegram. Click here to join our channel and stay updated with the latest news.

Next