Advertisement

ಕಮಿಷನರ್‌ ನಿವಾಸಕ್ಕೆ ಹಗ್ಗಜಗ್ಗಾಟ

12:42 AM Aug 30, 2019 | Team Udayavani |

ಬೆಂಗಳೂರು: ನಗರ ಪೊಲೀಸ್‌ ಆಯುಕ್ತರಿಗೆ ನೀಡಲಾಗುವ ಸರ್ಕಾರಿ ನಿವಾಸಕ್ಕೆ ಹಾಲಿ ಆಯುಕ್ತ ಭಾಸ್ಕರ್‌ ರಾವ್‌ ಹಾಗೂ ನಿರ್ಗಮಿತ ಆಯುಕ್ತ ಅಲೋಕ್‌ ಕುಮಾರ್‌ ನಡುವೆ ಹಗ್ಗಜಗ್ಗಾಟ ಮುಂದುವರಿದಿದೆ. ಇನ್‌ಫೆಂಟ್ರಿ ರಸ್ತೆಯಲ್ಲಿರುವ ನಗರ ಪೊಲೀಸ್‌ ಆಯುಕ್ತರ ನಿವಾಸದಲ್ಲಿ ಈ ಹಿಂದಿನ ಆಯುಕ್ತ ಅಲೋಕ್‌ ಕುಮಾರ್‌ ವಾಸವಿದ್ದರು. ಆಗಸ್ಟ್‌ 2ರಂದು ಅವರನ್ನು ಕೆಎಸ್‌ಆರ್‌ಪಿ ಎಡಿಜಿಪಿ ಹುದ್ದೆಗೆ ವರ್ಗಾವಣೆಗೊಂಡರು.

Advertisement

ಇದಾದ ಬಳಿಕ ಅಲೋಕ್‌ ಕುಮಾರ್‌ ನಿವಾಸ ತೆರವುಗೊಳಿಸಿದರೂ ಅವರಿಗೆ ಸೇರಿದ ಅರ್ಧದಷ್ಟು ವಸ್ತುಗಳು ಅದೇ ನಿವಾಸದಲ್ಲಿವೆ. ನಿವಾಸಕ್ಕೆ ಅಲೋಕ್‌ ಕುಮಾರ್‌ ಬೀಗ ಹಾಕಿಕೊಂಡು ಹೋಗಿದ್ದಾರೆ. ಹೀಗಾಗಿ, ಹಾಲಿ ಆಯುಕ್ತ ಭಾಸ್ಕರ್‌ ರಾವ್‌ ಅವರಿಗೆ ನಿವಾಸ ದೊರೆತಿಲ್ಲ.

ಈ ನಿಟ್ಟಿನಲ್ಲಿ ಅಧಿಕೃತ ನಿವಾಸ ತೆರವುಗೊಳಿಸಿಕೊಡುವಂತೆ ಆಯುಕ್ತ ಭಾಸ್ಕರ್‌ ರಾವ್‌, ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ನಿರಾಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next