Advertisement

RSS ಯೂ ಟರ್ನ್; ಕೇರಳ ಸಿಎಂ ತಲೆ ತೆಗೆಯೋದು ಬೇಡ, ಹೇಳಿಕೆ ವಾಪಸ್!

05:46 PM Mar 03, 2017 | Team Udayavani |

ಮಧ್ಯಪ್ರದೇಶ; ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ತಲೆ ತೆಗೆದರೆ ಒಂದು ಕೋಟಿ ರೂಪಾಯಿ ಬಹುಮಾನ ಕೊಡುವುದಾಗಿ ಘೋಷಿಸಿ ತೀವ್ರ ವಿವಾದಕ್ಕೊಳಗಾಗಿದ್ದ ಆರ್ ಎಸ್ ಎಸ್ ಮುಖಂಡ ಚಂದ್ರಾವತ್ ಕೊನೆಗೂ ಆರ್ ಎಸ್ಎಸ್ ಒತ್ತಡಕ್ಕೆ ಮಣಿದು, ಬಹಿರಂಗ ಸಭೆಯಲ್ಲಿ ಘೋಷಿಸಿದ್ದ “ಫತ್ವಾ’ ವನ್ನು ವಾಪಸ್ ಪಡೆದಿರುವುದಾಗಿ ಹೇಳಿಕೆ ನೀಡಿದ್ದಾರೆ.

Advertisement

ತಾನು ಸಭೆಯಲ್ಲಿ ಮಾತನಾಡುವಾಗ ಭಾವೋದ್ವೇಗಕ್ಕೆ ಒಳಗಾಗಿ ಕೇರಳ ಸಿಎಂ ತಲೆ ತೆಗೆದರೆ ಒಂದು ಕೋಟಿ ನೀಡುವುದಾಗಿ ಹೇಳಿಕೆ ನೀಡಿದ್ದೆ. ಹಾಗಾಗಿ ನಾನು ಕೇರಳ ಸಿಎಂ ವಿರುದ್ಧ ಘೋಷಿಸಿದ್ದ ಬಹುಮಾನದ ಹೇಳಿಕೆಯನ್ನು ವಾಪಸ್ ಪಡೆಯುವುದಾಗಿ ಚಂದ್ರಾವತ್ ತಿಳಿಸಿದ್ದಾರೆ ಎಂದು ಸಿಎನ್ ಎನ್ ನ್ಯೂಸ್ ವರದಿ ಮಾಡಿದೆ.

ತನ್ನ ಹೇಳಿಕೆಗೆ ವಿಷಾದ ವ್ಯಕ್ತಪಡಿಸುವುದಾಗಿ ಕುಂದನ್ ಚಂದ್ರಾವತ್ ಹೇಳಿದ್ದಾರೆ. ಮಧ್ಯಪ್ರದೇಶದ ಉಜ್ಜೈನಿಯಲ್ಲಿ ನಡೆದ ಸಮಾರಂಭದಲ್ಲಿ ಚಂದ್ರಾವತ್ ಕೇರಳ ಸಿಎಂ ವಿರುದ್ಧ ಫತ್ವಾ ಹೇಳಿಕೆ ನೀಡಿದ್ದರು.

ಚಂದ್ರಾವತ್ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ಆರ್ ಎಸ್ಎಸ್ ಕೂಡಾ ಇದು ನಮ್ಮ ಸಂಸ್ಕೃತಿ ಅಲ್ಲ. ಹಾಗಾಗಿ ಆ ಹೇಳಿಕೆಗೆ ಬೆಂಬಲ ಇಲ್ಲ ಎಂದು ಸ್ಪಷ್ಟಪಡಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next