Advertisement

ಧರ್ಮದರ್ಶಿಯನ್ನು ಅಡ್ಡಗಟ್ಟಿ SUV ಕಾರು,20 ಲಕ್ಷ ರೂಪಾಯಿ ದರೋಡೆ 

10:21 AM Jun 10, 2018 | Team Udayavani |

ತುಮಕೂರು: ಕುಣಿಗಲ್‌ನ ಬಿದನಗೆರೆಯಲ್ಲಿ  ದರೋಡೆಕೋರರು ಶನಿಮಹಾತ್ಮ ದೇವಾಲಯದ ಧರ್ಮದರ್ಶಿಯನ್ನು ಅಡ್ಡಗಟ್ಟಿ  20 ಲಕ್ಷ ರೂಪಾಯಿ ಮತ್ತು ಕಾರನ್ನು ದರೋಡೆಗೈದಿರುವ ಘಟನೆ ಶನಿವಾರ ರಾತ್ರಿ ನಡೆದಿದೆ. 

Advertisement

ವರದಿಯಾದಂತೆ ಕಾರಿನಲ್ಲಿ ತೆರಳುತ್ತಿದ್ದ ಧನಂಜಯ ಸ್ವಾಮೀಜಿ ಅವರನ್ನು ಅಡ್ಡಗಟ್ಟಿ ದ 6 ಮಂದಿ ದುಷ್ಕರ್ಮಿಗಳು ಕಣ್ಣಿಗೆ ರಾಸಾಯನಿಕ ಸಿಂಪಡಿಸಿ 20 ಲಕ್ಷ ರೂಪಾಯಿ ಹಣ ಮತ್ತು ಕಾರನ್ನು ದರೋಡೆಗೈದು ಪರಾರಿಯಾಗಿದ್ದಾರೆ. 

ಸ್ವಾಮೀಜಿ ಅವರಿಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕುಣಿಗಲ್‌ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next