Advertisement

ಧರ್ಮದರ್ಶಿಯನ್ನು ಅಡ್ಡಗಟ್ಟಿ SUV ಕಾರು,20 ಲಕ್ಷ ರೂಪಾಯಿ ದರೋಡೆ 

10:21 AM Jun 10, 2018 | Team Udayavani |

ತುಮಕೂರು: ಕುಣಿಗಲ್‌ನ ಬಿದನಗೆರೆಯಲ್ಲಿ  ದರೋಡೆಕೋರರು ಶನಿಮಹಾತ್ಮ ದೇವಾಲಯದ ಧರ್ಮದರ್ಶಿಯನ್ನು ಅಡ್ಡಗಟ್ಟಿ  20 ಲಕ್ಷ ರೂಪಾಯಿ ಮತ್ತು ಕಾರನ್ನು ದರೋಡೆಗೈದಿರುವ ಘಟನೆ ಶನಿವಾರ ರಾತ್ರಿ ನಡೆದಿದೆ. 

Advertisement

ವರದಿಯಾದಂತೆ ಕಾರಿನಲ್ಲಿ ತೆರಳುತ್ತಿದ್ದ ಧನಂಜಯ ಸ್ವಾಮೀಜಿ ಅವರನ್ನು ಅಡ್ಡಗಟ್ಟಿ ದ 6 ಮಂದಿ ದುಷ್ಕರ್ಮಿಗಳು ಕಣ್ಣಿಗೆ ರಾಸಾಯನಿಕ ಸಿಂಪಡಿಸಿ 20 ಲಕ್ಷ ರೂಪಾಯಿ ಹಣ ಮತ್ತು ಕಾರನ್ನು ದರೋಡೆಗೈದು ಪರಾರಿಯಾಗಿದ್ದಾರೆ. 

ಸ್ವಾಮೀಜಿ ಅವರಿಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕುಣಿಗಲ್‌ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next