Advertisement

ನಾರಾಯಣಗೌಡರಿಗೆ 10 ಕೋಟಿ ಸಂದಾಯ: ಚಂದ್ರಶೇಖರ್‌

11:25 PM May 14, 2019 | Team Udayavani |

ಕೆ.ಆರ್‌.ಪೇಟೆ: “ಆಪರೇಷನ್‌ ಕಮಲ’ಕ್ಕೆ ಒಳಗಾಗಿರುವ ಶಾಸಕ ಕೆ.ಸಿ.ನಾರಾಯಣಗೌಡರು ಬಿಜೆಪಿಯವರಿಂದ ಈಗಾಗಲೇ ಹತ್ತು ಕೋಟಿ ರೂ.ಪಡೆದುಕೊಂಡಿದ್ದು, ಬಾಕಿ ಹಣಕ್ಕಾಗಿ ಕಾಯುತ್ತಿದ್ದಾರೆ. ಬಾಕಿ ಹಣ ಸಿಕ್ಕ ತಕ್ಷಣವೇ ಮುಂಬೈಗೆ ಹಾರಿ ಹೋಗಲಿದ್ದಾರೆ ಎಂದು ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್‌ ಹೊಸ ಬಾಂಬ್‌ ಸಿಡಿಸಿದರು.

Advertisement

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಶಾಸಕ ನಾರಾಯಣಗೌಡರನ್ನು ಜೆಡಿಎಸ್‌ ಪಕ್ಷದ ವರಿಷ್ಠರು ಈಗಾಗಲೇ ಕೈಬಿಟ್ಟಿದ್ದಾರೆ. ಈಗ ನಡೆಯುತ್ತಿರುವ ಪುರಸಭಾ ಚುನಾವಣೆ ಉಸ್ತುವಾರಿಯನ್ನು ಶಾಸಕರಿಗೆ ನೀಡಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.

ಆದ ಕಾರಣ ಲೋಕಸಭಾ ಚುನಾವಣೆ ಫ‌ಲಿತಾಂಶ ಬಂದ ತಕ್ಷಣ ನಾರಾಯಣಗೌಡ ಮಾಯವಾದರೆ ಅಚ್ಚರಿಯಿಲ್ಲ. ಅವರು ಬಿಜೆಪಿಯವರಿಂದ ಈಗಾಗಲೇ ಮುಂಗಡವಾಗಿ 10 ಕೋಟಿ ರೂ.ಪಡೆದುಕೊಂಡಿದ್ದಾರೆ. ಅದರಿಂದಲೇ ಅಧಿವೇಶನದ ಸಮಯದಲ್ಲಿ 15 ದಿನ ಮುಂಬೈನಲ್ಲೇ ಉಳಿದುಕೊಂಡಿದ್ದರು.

ಬಿಜೆಪಿಯವರು ಕೊಟ್ಟ ಮಾತಿನಂತೆ ಬಾಕಿ ಹಣ ಕೈ ಸೇರಿದ ತಕ್ಷಣವೇ ಅವರು ಕ್ಷೇತ್ರ ಬಿಡಲಿದ್ದಾರೆ. ಲೋಕಸಭಾ ಚುನಾವಣಾ ಫ‌ಲಿತಾಂಶದ ಬಳಿಕ ಬಿಜೆಪಿಯವರು ಅವರನ್ನು ಎಲ್ಲಿಗೆ ಎತ್ತಿಕೊಂಡು ಹೋಗುವರೋ ಗೊತ್ತಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next