Advertisement

ಪತ್ನಿಯಿಂದಲೇ ರೌಡಿಶೀಟರ್‌ ಕೊಲೆ

12:50 AM May 04, 2019 | Team Udayavani |

ಬೆಂಗಳೂರು: ಚೆನೈಗೆ ಕುಟುಂಬ ಸ್ಥಳಾಂತರಿಸುವ ವಿಚಾರಕ್ಕೆ ದಂಪತಿ ನಡುವೆ ನಡೆದ ಜಗಳ ವಿಕೋಪಕ್ಕೆ ತಿರುಗಿ ಪತ್ನಿಯೇ ಸ್ನೇಹಿತನ ಜತೆ ಸೇರಿ ಪತಿಯನ್ನು ಕೊಂದ ಘಟನೆ ಆಡುಗೋಡಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ತಡರಾತ್ರಿ ನಡೆದಿದೆ.

Advertisement

ರೌಡಿಶೀಟರ್‌ ಎಡ್ವಿನ್‌ ಕೊಲೆಯಾದವ. ಪ್ರಕರಣ ಸಂಬಂಧ ಎಡ್ವಿನ್‌ ಪತ್ನಿ ಸುಜಾತಾ ಹಾಗೂ ಶ್ರೀಧರ್‌ ಎಂಬಾತನನ್ನು ಆಡುಗೋಡಿ ಪೊಲೀಸರು ಬಂಧಿಸಿದ್ದಾರೆ.

ಕೊಲೆಯಾದ ಎಡ್ವಿನ್‌ ಆಡುಗೋಡಿ ಪೊಲೀಸ್‌ ಠಾಣೆಯಲ್ಲಿ ರೌಡಿಶೀಟರ್‌ ಆಗಿದ್ದ. ಕಳೆದ ಕೆಲ ವರ್ಷಗಳಿಂದ ಅಪರಾಧ ಚಟುವಟಿಕೆಗಳಿಂದ ದೂರ ಉಳಿದಿದ್ದು, ಚೆನೈನಲ್ಲಿ ನೆಲೆಸಿದ್ದ. ಪತ್ನಿ ಸುಜಾತಾ ಮೂವರು ಮಕ್ಕಳ ಜತೆ ನಗರದಲ್ಲಿ ವಾಸಿಸುತ್ತಿದ್ದರು.

ಪತ್ನಿಯ ಮೇಲೆ ಅನುಮಾನ ಹೊಂದಿದ್ದ ಎಡ್ವಿನ್‌, ಹಲವು ಬಾರಿ ಚೆನೈಗೆ ಬರುವಂತೆ ಕರೆದರೂ ಆಕೆ ಹೋಗಿರಲಿಲ್ಲ. ಇದೇ ವಿಚಾರಕ್ಕೆ ದಂಪತಿ ನಡುವೆ ಜಗಳ ನಡೆಯುತ್ತಿತ್ತು. ಗುರುವಾರ ರಾತ್ರಿ 11.30ಕ್ಕೆ ಇದೇ ವಿಚಾರವಾಗಿ ಮತ್ತೆ ಜಗಳ ನಡೆದಿದ್ದು.

ತಾನು ಚೆನ್ನೈಗೆ ಬರುವುದಿಲ್ಲ ಎಂದು ಸುಜಾತಾ ಹೇಳಿದ್ದಾಳೆ. ಪಾನಮತ್ತನಾಗಿದ್ದ ಎಡ್ವಿನ್‌, ಚೆನೈಗೆ ಬರದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಚಾಕು ತೆಗೆದುಕೊಂಡು ಹೊಟ್ಟೆಗೆ ಚುಚ್ಚಿಕೊಳ್ಳಲು ಯತ್ನಿಸಿದ್ದಾನೆ.

Advertisement

ಜಗಳವಿಕೋಪಕ್ಕೆ ತಿರುಗಿ ಸುಜಾತಾ ಚಾಕು ಕಿತ್ತುಕೊಂಡು ಎಡ್ವಿನ್‌ಗೆ ಇರಿದಿದ್ದಾಳೆ. ಇದೇ ಸಮಯಕ್ಕೆ ಪಕ್ಕದ ಮನೆಯಲ್ಲಿದ್ದ ಆಕೆಯ ಸ್ನೇಹಿತ ಶ್ರೀಧರ್‌, ಚಾಕುವಿನಿಂದ ಎಡ್ವಿನ್‌ಗೆ ಹಲವುಬಾರಿ ಇರಿದು ಕೊಲೆಗೈದ. ನಂತರ ಇಬ್ಬರೂ ಪರಾರಿಯಾಗಿದ್ದರು.

ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next