Advertisement

ಶಾಸಕರಿಗೆ ಜೀವ ಬೆದರಿಕೆ ಪ್ರಕರಣ: ಪರೇಡ್ ನಡೆಸಿ ರೌಡಿಗಳ ಕೆನ್ನೆಗೆ ಬಾರಿಸಿದ SP ಅನುಪಮ್

01:14 PM Nov 20, 2020 | keerthan |

ವಿಜಯಪುರ: ಎಸ್ಪಿ ಅನುಪಮ ಅಗರವಾಲ ಶುಕ್ರವಾರ ಜಿಲ್ಲೆಯ ರೌಡಿಗಳ ತುರ್ತು ಪರೇಡ್ ನಡೆಸಿ, ಕೆಲವು ರೌಡಿಗಳ ಕೆನ್ನೆಗೆ ಬಾರಿಸಿ ಎಚ್ಚರಿಸಿದ ಘಟನೆ ಜರುಗಿತು.

Advertisement

ಜಿಲ್ಲೆಯ ಶಾಸಕ ದೇವಾನಂದ ಚವ್ಹಾಣ ತಮಗೆ ಜೀವ ಬೆದರಿಕೆ ಇದ್ದು, ಪೊಲೀಸ್ ವೈಫಲ್ಯವೇ ಇದಕ್ಕೆ ಕಾರಣ‌, ಜಿಲ್ಲೆಯಲ್ಲಿ ನಡೆಯುವ ಬಹುತೇಕ ಎಲ್ಲ ಸಾಮಾಜಿಕ ಅಕ್ರಮಗಳು ಪೊಲೀಸರ ಸಹಕಾರದಿಂದಲೇ ನಡೆಯುತ್ತಿವೆ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದ್ದು, ಪೊಲೀಸ್ ವೈಫಲ್ಯ ಎಂದು ಆರೋಪಿಸಿದ್ದರು.

ಇದನ್ನೂ ಓದಿ:ಯುವತಿಯರನ್ನು ಮುಂದಿಟ್ಟುಕೊಂಡು ಹನಿಟ್ರ್ಯಾಪ್‌: ಪಿರಿಯಾಪಟ್ಟಣದಲ್ಲಿ ಐವರ ಬಂಧನ

ಇದರ ಬೆನ್ನಲ್ಲೇ ಜಿಲ್ಲೆಯ ರೌಡಿಗಳ ಪರೇಡ್ ನಡೆಸಿರುವ ಎಸ್ಪಿ ಅನುಪಮ್ ಅಗರವಾಲ, ಲೈಸೆನ್ಸ್ ಹೊಂದಿರುವ ಗನ್ ಮೂಲಕ ಬೆದರಿಸಿ ಬಡ್ಡಿ ವ್ಯವಹಾರ ನಡೆಸುತ್ತಿದ್ದ ಭೀಮಶಿ ಬಜಂತ್ರಿ ಕೆನ್ನೆಗೆ ಬಾರಿಸಿ, ನ್ಯಾಯಯುತವಾಗಿ ಬದುಕುವಂತೆ ಎಚ್ಚರಿಕೆ ನೀಡಿದರು.

Advertisement

ಇದಲ್ಲದೇ ಜಿಲ್ಲೆಯ ಎಲ್ಲ ರೌಡಿಗಳ ಮೇಲೆ ಕಟ್ಟುನಿಟ್ಡಿನ ಕಣ್ಣಿಡಬೇಕು. ಸಮಾಜ ಬಾಹಿರ ಕೃತ್ಯದಲ್ಲಿ ತೊಡಗಿ ಸಕ್ರಿಯರಾಗಿರುವ ವ್ಯಕ್ತಿಗಳ ಮೇಲೆ ರೌಡಿ ಶೀಟ್ ಓಪನ್ ಮಾಡುವಂತೆ ಸ್ಥಳದಲ್ಲಿದ್ದ ವಿವಿಧ ಠಾಣೆಯ ಪೊಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next