Advertisement

ಎನ್‌ ಡಿ ತಿವಾರಿ ಪುತ್ರ ರೋಹಿತ್‌ ಶೇಖರ್‌ ಮೃತ ಸ್ಥಿತಿಯಲ್ಲಿ ದಿಲ್ಲಿ ಮ್ಯಾಕ್ಸ್‌ ಆಸ್ಪತ್ರೆಗೆ

09:54 AM Apr 17, 2019 | Sathish malya |

ಹೊಸದಿಲ್ಲಿ : ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಮಾಜಿ ಮುಖ್ಯಮಂತ್ರಿ ದಿವಂಗತ ಎನ್‌ ಡಿ ತಿವಾರಿ ಅವರ ಪುತ್ರ ರೋಹಿತ್‌ ಶೇಖರ್‌ ತಿವಾರಿ ಅವರನ್ನು ಇಂದು ಮಂಗಳವಾರ ಇಲ್ಲಿನ ಸಾಕೇತ್‌ನಲ್ಲಿರುವ ಮ್ಯಾಕ್ಸ್‌ ಆಸ್ಪತ್ರೆಗೆ ಮೃತ ಸ್ಥಿತಿಯಲ್ಲಿ ತರಲಾಯಿತು.

Advertisement

ಇಂದು ಮಂಗಳವಾರ ಮಧ್ಯಾಹ್ನ ರೋಹಿತ್‌ ಅವರನ್ನು ಮೃತ ಸ್ಥಿತಿಯಲ್ಲಿ ದಕ್ಷಿಣ ದಿಲ್ಲಿಯ ಆಸ್ಪತ್ರೆಗೆ ತರಲಾಯಿತೆಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ದಕ್ಷಿಣ ದಿಲ್ಲಿಯ ಡಿಸಿಪಿ ವಿಜಯ್‌ ಕುಮಾರ್‌ ಅವರು ಈ ವಿಷಯವನ್ನು ದೃಢಪಡಿಸಿದ್ದಾರೆ; ಆದರೆ ರೋಹಿತ್‌ ಅವರ ಸಾವಿನ ಕಾರಣವೇನೆಂದು ಇನ್ನೂ ಗೊತ್ತಾಗಿಲ್ಲ.

ರೋಹಿತ್‌ ಅವರು ಎನ್‌ ಡಿ ತಿವಾರಿ ಮತ್ತು ಉಜ್ವಲಾ ಶರ್ಮಾ ಅವರ ಜೈವಿಕ ಪುತ್ರನಾಗಿದ್ದು, ಎನ್‌ ಡಿ ತಿವಾರಿಯೇ ತನ್ನ ತಂದೆ ಎಂಬುದನ್ನು ಕೋರ್ಟಿನಲ್ಲಿ ಸುದೀರ್ಘ‌ ಕಾನೂನು ಹೋರಾಟದಲ್ಲಿ ಸಾಬೀತುಪಡಿಸಿಕೊಂಡಿದ್ದರು.

2017ರ ಜನವರಿಯಲ್ಲಿ ರೋಹಿತ್‌ ಶೇಖರ್‌ ಬಿಜೆಪಿ ಸೇರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next