Advertisement

ಉತ್ತಪ್ಪ ಗೈರು ಕಾಡಿತು: ವೋಕ್ಸ್‌

12:28 PM May 05, 2017 | |

ಕೋಲ್ಕತಾ: ಅಗ್ರ ಕ್ರಮಾಂಕದ ಇನ್‌-ಫಾರ್ಮ್ ಬ್ಯಾಟ್ಸ್‌ ಮನ್‌ ರಾಬಿನ್‌ ಉತ್ತಪ್ಪ ಅನುಪಸ್ಥಿತಿಯಿಂದಾಗಿ ತಂಡಕ್ಕೆ
ಹಿನ್ನಡೆಯಾಯಿತು ಎಂಬುದಾಗಿ ಕೋಲ್ಕತಾ ನೈಟ್‌ ರೈಡರ್ನ ಪೇಸ್‌ ಬೌಲರ್‌ ಕ್ರಿಸ್‌ ವೋಕ್ಸ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

“ರಾಬಿನ್‌ ಉತ್ತಪ್ಪ ಅವರ ಗೈರು ನಮ್ಮ ಪಾಲಿಗೆ ದೊಡ್ಡ ನಿರ್ವಾತ ತುಂಬಿತು. ಈ ಕೂಟದಲ್ಲಿ ಅವರು ಗರಿಷ್ಠ ರನ್‌
ಮಾಡುವುದರೊಂದಿಗೆ ತಂಡದ ಸಾಕಷ್ಟು ಗೆಲುವುಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಮುಂದಿನ ಪಂದ್ಯಕ್ಕೆ ಅವರು ಮರಳುವ ವಿಶ್ವಾಸವಿದೆ’ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next