Advertisement

ಬ್ಯಾಂಕ್‌ ಉದ್ಯೋಗಿಯಾಗಿದ್ದುಕೊಂಡು 8 ಕೋಟಿ ರೂ. ಮೊತ್ತ ಎಗರಿಸಿದ ಖದೀಮ ಅಂದರ್‌

07:55 PM May 18, 2021 | Team Udayavani |

ತಿರುವನಂತಪುರ: ಬ್ಯಾಂಕ್‌ ಉದ್ಯೋಗಿಯಾಗಿದ್ದುಕೊಂಡು ಹಲವರ ಖಾತೆಗಳಿಂದ 8 ಕೋಟಿ ರೂ.ಗಳಿಗಿಂತಲೂ ಅಧಿಕ ಮೊತ್ತ ಎಗರಿಸಿದ ವಿಜೇಶ್‌ ವರ್ಗೀಸ್‌ ಎಂಬಾತನನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ.

Advertisement

ಆತ ಪಟ್ಟನಂತಿಟ್ಟದಲ್ಲಿರುವ ಬ್ಯಾಂಕ್‌ವೊಂದರ ಶಾಖೆಯಲ್ಲಿ ಕ್ಲರ್ಕ್‌ ಆಗಿ ಕೆಲಸ ಮಾಡುತ್ತಿದ್ದಾನೆ. ಸಕ್ರಿಯವಾಗಿ ಇಲ್ಲದೇ ಇರುವ ನಿಗದಿತ ಠೇವಣಿಗಳನ್ನು ಗಮನಿಸಿ ಆ ಮೊತ್ತವನ್ನು ಲಪಟಾಯಿಸುವುದರಲ್ಲಿ ಆತ ಸಿದ್ಧಹಸ್ತನಾಗಿದ್ದಾನೆ.

ಫೆಬ್ರವರಿಯಲ್ಲಿ ಬ್ಯಾಂಕ್‌ ಉದ್ಯೋಗಿಯೊಬ್ಬರ ಠೇವಣಿ ಮೊತ್ತ ಕಬಳಿಸಿದ ಪ್ರಕರಣ ಬೆಳಕಿಗೆ ಬಂದ ಬಳಿಕ ವರ್ಗೀಸ್‌ನ ವಿವರ ಗೊತ್ತಾಗಿತ್ತು. ನೌಕಾಪಡೆಯಲ್ಲಿ ಕೆಲಸದಲ್ಲಿದ್ದ ಆತನ ಪತ್ತೆಗಾಗಿ ಪೊಲೀಸರು ವಿಶೇಷ ತಂಡ ರಚಿಸಿದ್ದರು.

ಇದನ್ನೂ ಓದಿ :ವಿವಾಹ ವಾರ್ಷಿಕೋತ್ಸವದ ದಿನದಂದೇ ಪತ್ನಿ ಸಾವು : ಕುಟುಂಬದ ಸಂಭ್ರಮಕ್ಕೆ ತಣ್ಣೀರೆರೆಚಿದ ಕೋವಿಡ್

ಭಾನುವಾರ ಬೆಂಗಳೂರಿನಲ್ಲಿ ಅಡಗಿದ್ದ ಆತನನ್ನು ಪೊಲೀಸರು ಬಂಧಿಸಿ ತಿರುವನಂತಪುರಕ್ಕೆ ಕರೆತಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next