Advertisement

Road Mishap ಕಾರ್ಕಳ: ಗೂಡ್ಸ್‌ ಟೆಂಪೋ ಢಿಕ್ಕಿ; ಗಾಯಾಳು ಮಹಿಳೆ ಸಾವು

12:43 AM Dec 06, 2023 | Team Udayavani |

ಕಾರ್ಕಳ: ರಸ್ತೆಯ ಡಿವೈಡರ್‌ ದಾಟಲು ಕಾಯುತ್ತಿದ್ದ ವೇಳೆ ಗೂಡ್ಸ್‌ ಟೆಂಪೋ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಡಿ. 4ರಂದು ಕಾರ್ಕಳದ ಕುಂಟಲ್ಪಾಡಿಯಲ್ಲಿ ನಡೆದಿದೆ.

Advertisement

ಕಸಬಾದ ಹಿರಿಯಂಗಡಿ ನಿವಾಸಿ ಸ್ವಸ್ತಿ (55) ಅವರು ಬೈಪಾಸ್‌ ರಸ್ತೆಯಲ್ಲಿ ಶಿವತಿಕೆರೆ ಕಡೆಯಿಂದ ಕುಂಟಲ್ಪಾಡಿ ಕೃಷ್ಣ ಕ್ಷೇತ್ರದ ಕಡೆಗೆ ನಡೆದುಕೊಂಡು ತೆರಳುತ್ತಿದ್ದರು. ಹಿರಿಯಂಗಡಿ ವೆಂಕಟೇಶ ಇಂಡಸ್ಟ್ರೀಸ್‌ ಎದುರುಗಡೆ ರಸ್ತೆಯ ಮಧ್ಯಭಾಗದಲ್ಲಿರುವ ಡಿವೈಡರ್‌ ಬಳಿ ರಸ್ತೆ ದಾಟಲು ನಿಂತುಕೊಂಡಿದ್ದಾಗ ಪುಲ್ಕೇರಿ ಕಡೆಯಿಂದ ಬಂಗ್ಲೆಗುಡ್ಡೆ ಕಡೆಗೆ ಸುಧಾಕರ ಅವರು ಚಲಾಯಿಸುತಿದ್ದ 407 ಗೂಡ್ಸ್‌ ಟೆಂಪೋ ಸ್ವಸ್ತಿ ಅವರಿಗೆ ಢಿಕ್ಕಿ ಹೊಡೆದಿತ್ತು. ಮಹಿಳೆಯ ತಲೆಗೆ ತೀವ್ರತರ ಪೆಟ್ಟಾಗಿತ್ತು. ಅವರನ್ನು ಸ್ಥಳೀಯರು ಟೆಂಪೋ ಚಾಲಕನ ಸಹಾಯದಿಂದ ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದರು.

ಹೆಚ್ಚಿನ ಚಿಕಿತ್ಸೆ ಅವಶ್ಯ ಎಂದು ಕಂಡು ಬಂದ ಹಿನ್ನೆಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಪರೀಕ್ಷಿಸಿದ ವೈದ್ಯರು ಮಹಿಳೆ ಮೃತಪಟ್ಟಿದ್ದಾಗಿ ತಿಳಿಸಿದ್ದಾರೆ. ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕಿಗೆ ಟೆಂಪೋ ಢಿಕ್ಕಿ: ಸವಾರ ಸಾವು
ಕಾರ್ಕಳ: ಈದು ಗ್ರಾಮದ ಮಂಗಳಾ ಫಾರ್ಮ್ ಬಳಿ ಬೈಕಿಗೆ ಗೂಡ್ಸ್‌ ಟೆಂಪೋ ಢಿಕ್ಕಿ ಹೊಡೆದು ಬೈಕ್‌ ಸವಾರ ಮುತ್ತಯ್ಯ ನಲ್ಕೆ (55) ಮೃತಪಟ್ಟ ಘಟನೆ ಡಿ. 4ರ ರಾತ್ರಿ ನಡೆದಿದೆ.

ಈದುವಿನ ಮಂಗಳಾ ನರ್ಸರಿ ಬಳಿ ಮುತ್ತಯ್ಯ ಅವರು ತನ್ನ ಬೈಕಿನಲ್ಲಿ ರಾತ್ರಿ 8.25ರ ವೇಳೆಗೆ ಮನೆಗೆ ತೆರಳುತ್ತಿದ್ದ ವೇಳೆ ಎದುರುಗಡೆಯಿಂದ ಬಂದ ಸತೀಶ್‌ ಚಲಾಯಿಸುತ್ತಿದ್ದ ಟೆಂಪೋ ಢಿಕ್ಕಿ ಹೊಡೆದಿದೆ. ಚಾಲಕ ಸತೀಶ್‌ ಚಲಾಯಿಸುತ್ತಿದ್ದ ವಾಹನವನ್ನು ವೇಗವಾಗಿ ಚಲಾಯಿಸಿ ರಸ್ತೆಯ ತೀರಾ ಬಲಭಾಗದಲ್ಲಿ ಚಲಾಯಿಸಿ ಮುತ್ತಯ್ಯನವರ ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಅವರು ರಸ್ತೆಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟರು. ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Advertisement

ವಿದ್ಯುತ್‌ ಕಂಬಕ್ಕೆ ಬೈಕ್‌ ಢಿಕ್ಕಿ: ಗಾಯ
ಕಾರ್ಕಳ: ಕಾರ್ಕಳ – ಉಡುಪಿ ರಸ್ತೆಯ ಬೈಲೂರು ಗ್ರಾಮದ ಬಸ್ರಿ ಶಾಲೆಯ ಬಳಿ ದ್ವಿಚಕ್ರ ಸವಾರ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದು ಗಾಯಗೊಂಡ ಘಟನೆ ಡಿ. 3ರಂದು ನಡೆದಿದೆ.

ವಿಶ್ವನಾಥ ಎಂ. (44) ಅವರು ಮೋಟಾರ್‌ ಸೈಕಲ್‌ನಲ್ಲಿ ಕಾರ್ಕಳ ಕಡೆಯಿಂದ ಉಡುಪಿ ಕಡೆಗೆ ತೆರಳು ತ್ತಿದ್ದರು. ಅತೀ ವೇಗ ಹಾಗೂ ಅಜಾಗ ರೂಕತೆಯಿಂದ ಸವಾರಿ ಮಾಡಿದ ಪರಿಣಾಮ ರಸ್ತೆ ಬದಿಯ ವಿದ್ಯುತ್‌ ಕಂಬಕ್ಕೆ ಅವರಿದ್ದ ವಾಹನ ಢಿಕ್ಕಿ ಹೊಡೆದಿದೆ.

ಪರಿಣಾಮ ಅವರ ತಲೆಗೆ ಹಾಗೂ ಹೊಟ್ಟೆಗೆ ತೀವ್ರ ಸ್ವರೂಪದ ಗಾಯಗಳಾಗಿದೆ. ಸ್ಥಳೀಯ ರಿಕ್ಷಾ ಚಾಲಕ ರಾಜೇಶ ಅವರು ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next